ಜುಬೈಲ್: ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ಶಾಸಕ ಮೊಯ್ದಿನ್ ಬಾವಗೆ ಮನವಿ

Update: 2018-04-08 09:26 GMT

ಜುಬೈಲ್‌, ಎ. 8: ಸೌದಿ ಅರೇಬಿಯಾದ ಅಲ್ ಜುಬೈಲ್‌ಗೆ ಭೇಟಿ ನೀಡಿದ್ದ ಶಾಸಕ ಬಿ.ಎ.ಮೊಯ್ದಿನ್ ಬಾವ ಅವರನ್ನು ಅಡ್ಡೂರು ಸೆಂಟ್ರಲ್ ಕಮಿಟಿಯ ನಿಯೋಗ ಅಧ್ಯಕ್ಷ ಮುಹಮ್ಮದ್ ಶರೀಫ್ ಅಡ್ಡೂರ್‌ ಅವರ ನೇತೃತ್ವದಲ್ಲಿ ಶನಿವಾರ ಭೇಟಿಯಾಗಿ ತಮ್ಮ ಊರಿನ ಅಭಿವೃದ್ಧಿಗೆ ಹಾಗೂ ಕೆಲವು ಸಮಸ್ಯೆಗಳಿಗೆ ಸಂಬಂಧಪಟ್ಟ ಮನವಿ ಸಲ್ಲಿಸಿದರು.

ಈ ಸಂದರ್ಭ ನಿಯೋಗದಲ್ಲಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಮನ್ಸೂರ್ ಟಿ, ಅಬ್ದುಲ್ ರಹೀಮ್ ಟಿ, ಅಬ್ದುಲ್ ರಝಾಕ್ ಕೆಎಂಟಿ, ನವಾಝ್ ಅದ್ಯಪಾಡಿ, ರಝಾಕ್ ಮಂಜೊಟ್ಟಿ, ಯುಸೂಫ್ ಎ.ಜಿ. ಮುಂತಾದವರಿದ್ದರು.

ಮನವಿ ಸ್ವೀಕರಿಸಿದ ಶಾಸಕರು ಮುಂದಿನ ದಿನಗಳಲ್ಲಿ ಗಮನಕ್ಕೆ ತರಲಾದ ಅಡ್ಡೂರಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News