ಅಬುಧಾಬಿ: ಮೆಹ್ಫಿಲ್-ಇ-ನೂರ್ ಕಾರ್ಯಕ್ರಮ

Update: 2018-04-10 18:22 GMT

ಅಬುಧಾಬಿ, ಎ. 10: ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲಘಟ್ಟದಲ್ಲಿ ಕುರಾನ್ ಮತ್ತು ಹದೀಸ್ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮುನ್ನಡೆಸುತ್ತಿದ್ದ ಪ್ರವಾದಿ ಅನುಯಾಯಿಗಳು ಜಗತ್ತಿನ ಅತ್ಯುತ್ತಮ ಜನ ಸಮೂಹವಾಗಿದ್ದರು ಎಂದು ಸೈಯದ್ ಮುನವ್ವರಲೀ ಶಿಹಾಬ್ ತಂಙಳ್ ಹೇಳಿದರು.

ಅವರು ನೂರುಲ್ ಹುದಾ ಯುಎಇ ಸಮಿತಿಯ ವಾರ್ಷಿಕೋತ್ಸವದ ಪ್ರಯುಕ್ತ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮೆಹ್ಫಿಲ್-ಇ-ನೂರ್ 2018 ಮತ್ತು ಯೂತ್ ಕನ್ವೆನ್ಷನ್ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ಮೆಹ್ಫಿಲ್-ಇ-ನೂರ್ ಸ್ವಾಗತ ಸಮಿತಿ ಚೇರ್ಮೇನ್ ಸೈಯದ್ ಅಬ್ದುಲ್ ರಹ್ಮಾನ್ ಅಝ್ಹರಿ ತಂಙಳ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಆಕ್ಟಿಂಗ್ ಚೇರ್ಮೇನ್  ಅಶ್ರಫ್ ಪಿ.ಕೆ ಸ್ವಾಗತಿಸಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ, ಅಬುಧಾಬಿ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಸದಸ್ಯ ಖಾನ್ ಝಮಾನ್ ಸುರೂರ್ ಖಾನ್ ಅವರು ಮಾತನಾಡಿ ಶುಭ ಹಾರೈಸಿದರು.

ಮಾಡನ್ನೂರು ಜಮಾಅತ್ ಖತೀಬ್ ಹಾಗೂ ಬಪ್ಪಲಿಗೆ ಗ್ಲೋಬಲ್ ಫ್ರೆಂಡ್ಸ್ ಗೌರವಾದ್ಯಕ್ಷ ಸಿರಾಜುದ್ದೀನ್ ಫೈಝಿ ಯೂತ್ ಕನ್ವೆನ್ಷನ್ ಬಗ್ಗೆ ಮಾತನಾಡಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ನೂರುಲ್ ಹುದಾ ಯೂತ್ ವಿಂಗ್ ಯುಎಇ ಸಮಿತಿಯ ಪದಾಧಿಕರಿಗಳ ವಿವರಗಳನ್ನು ನೀಡಿದರು.

ಮುಖ್ಯ ಪ್ರಭಾಷಕ ಅಂತಾರಾಷ್ಟ್ರೀಯ ವಾಗ್ಮಿ ಖಲೀಲ್ ಹುದವಿ ಅಲ್ ಮಾಲಿಕಿ ಉತ್ತಮ ಸ್ವಭಾವ ಗುಣಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಸಮಗ್ರ ಮಾಹಿತಿಯನ್ನೊಳಗೊಂಡ ಡೊಕ್ಯುಮೆಂಟರಿಯನ್ನು ಅನಾವರಣಗೊಳಿಸಲಾಯಿತು ಮತ್ತು ನೂರುಲ್ ಹುದಾ ಯುಎಇ ಸಮಿತಿಯ ವತಿಯಿಂದ ಸಾಮಾಜಿಕವಾಗಿ ಉತ್ಕೃಷ್ಟ ಸೇವೆಗೈದ  ಸೈಯದ್ ಮುನವ್ವರಲೀ ಶಿಹಾಬ್ ತಂಙಳ್ ಮತ್ತು ಅಬುಧಾಬಿ ಚೇಂಬರ್ ಆಫ್ ಕಾಮರ್ಸ್ ಸದಸ್ಯ ಖಾನ್ ಝಮಾನ್ ಸುರೂರ್ ಖಾನ್  ಅವರನ್ನು ಸನ್ಮಾನಿಸಲಾಯಿತು.

ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಕಾರ್ಯಾದ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಲ್ ದುವಾ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಇಷ್ಕ್-ಇ-ಎಮರಾತ್ ತಂಡದಿಂದ ಆಕರ್ಷಕ ಬುರ್ದಾ ಆಲಾಪನೆ ನಡೆಯಿತು.

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಗೌರವಾಧ್ಯಕ್ಷ ಸೈಯದ್ ಅಸ್ಗರ್ ಅಲೀ ತಂಙಲ್, ಧಾರ್ಮಿಕ ಸಲಹೆಗಾರರಾದ  ಖಲೀಲುರಹ್ಮಾನ್ ಖಾಷಿಫಿ, ಅಧ್ಯಕ್ಷ ಶೆರೀಫ್ ಕಾವು, ಕೋಶಾಧಿಕಾರಿ  ಅಶ್ರಫ್ ಯಾಕೂತ್ ನೆಕ್ಕರೆ, ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷ ಎಮ್.ಕೆ ಬ್ಯಾರಿ, ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಕೆಐಸಿ ದುಬೈ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ಅಬುಧಾಬಿ ಸಮಿತಿಯ ಅಧ್ಯಕ್ಷ ಹನೀಫ್ ಅರಿಯಮೂಲೆ, ನೂರುಲ್ ಹುದಾ ಅಬುಧಾಬಿ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಪೂಚಕ್ಕಾಡ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾರುನ್ನೂರ್ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್, ದಾರುನ್ನೂರು ದುಬೈ ಸಮಿತಿಯ ಅಧ್ಯಕ್ಷ ರಫೀಕ್ ಆತೂರು, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ, ಕೆಐಸಿ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೆರೀಫ್ ಕೊಡಿನೀರು, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ  ಅಶ್ರಫ್ ಪರ್ಲಡ್ಕ, ನೂರುಲ್ ಹುದಾ ಯೂತ್ ವಿಂಗ್ ಅಧ್ಯಕ್ಷ ರಝಾಕ್ ಕಾವು, ಪ್ರಧಾನ ಕಾರ್ಯದರ್ಶಿ, ತಾಜುದ್ದೀನ್ ಕೊಚ್ಚಿ, ಕೋಶಾಧಿಕಾರಿ  ರಿಫಾಯಿ ಗೂನಡ್ಕ, ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷ ನವಾಝ್ ಬಿಸಿ ರೋಡ್, ಕಾರ್ಯಾಧ್ಯಕ್ಷ ಆಸಿಫ್ ಮರೀಲ್, ಪ್ರಧಾನ ಕಾರ್ಯದರ್ಶಿ  ಜಾಬಿರ್ ಬೆಟ್ಟಂಪಾಡಿ, ಕೋಶಾಧಿಕಾರಿ  ನಾಸಿರ್ ಬಪ್ಪಲಿಗೆ, ದಾರುನ್ನೂರು ಯೂತ್ ಟೀಮ್ ಕೋಶಾಧಿಕಾರಿ  ಇಫ್ತಿಕಾರ್ ಕಣ್ಣೂರು, ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಲತೀಫ್ ಕೌಡಿಚ್ಚಾರ್, ಅಬುಧಾಬಿ ಸಮಿತಿಯ ಪ್ರಧಾನ ಕಾರ್ಯದರ್ಶಿ  ಬಷೀರ್ ಕಾವು, ಕೋಶಾಧಿಕಾರಿ  ನೌಶಾದ್ ಕೆ ಕೆ, ಸಂಘಟನಾ ಕಾರ್ಯದರ್ಶಿ  ಮುಹಮ್ಮದ್ ಅಲೀ ಮಾಡನ್ನೂರು, ದುಬೈ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಸಲಾಮ್ ಬಪ್ಪಲಿಗೆ, ಕಾರ್ಯಾಧ್ಯಕ್ಷ ಅನ್ವರ್ ಮಣಿಲ, ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಅಝೀಝ್ ಸೋಂಪಾಡಿ, ಕೋಶಾಧಿಕಾರಿ  ಯೂಸುಫ್ ಈಶ್ವರಮಂಗಿಲ,  ಶಾರ್ಜಾ ಸಮಿತಿಯ ಗೌರವಾಧ್ಯಕ್ಷ ರಝಾಕ್ ಸೋಂಪಾಡಿ, ಅಧ್ಯಕ್ಷ ಅಶ್ರಫ್ ಗಾಳಿಮುಕ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆಮ್ಮಿಂಜೆ ಮೊದಲಾದವರು ಹಾಗೂ ನೂರುಲ್ ಹುದಾ ಅಬುಧಾಬಿ,  ದುಬೈ, ಶಾರ್ಜಾ ಮತ್ತು ಕ್ಲಸ್ಟರ್ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನೌಫಲ್ ಅಬುಧಾಬಿ ಮತ್ತು ಮೆಹ್ಫಿಲ್-ಇ-ನೂರ್ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅನ್ವರ್ ಮಾಣಿಲ ಹಾಗೂ  ಕಾರ್ಯದರ್ಶಿ  ಅಶ್ರಫ್ ಪರ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.

ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News