ಡಿ.ಕೆ.ಎಸ್.ಸಿ ಅಬುಧಾಬಿ: ಇಪ್ತಾರ್ ಕೂಟ, ಬದರ್ ಅನುಸ್ಮರಣೆ

Update: 2018-06-14 18:07 GMT

ದುಬೈ, ಜೂ. 14: ಡಿ.ಕೆ.ಎಸ್.ಸಿ ಅಬುಧಾಬಿ ಯುನಿಟ್ ಇದರ ವತಿಯಿಂದ ಅಬುಧಾಬಿಯ ಮದೀನತ್ ಝಹಿದ್ ಲೂಲು ಪಾರ್ಟಿ ಹಾಲ್ ನಲ್ಲಿ ಡಿ.ಕೆ.ಎಸ್.ಸಿ ಅಬುಧಾಬಿ ಯುನಿಟ್ ಅಧ್ಯಕ್ಷ ಇಕ್ಬಾಲ್ ಕುಂದಾಪುರ ಅವರ ಉಸ್ತುವಾರಿಯಲ್ಲಿ ರಾಷ್ಟ್ರಿಯ ಸಮಿತಿ ಅಧ್ಯಕ್ಷ ಹಾಜಿ ಇಕ್ಬಾಲ್ ಕಣ್ಣಂಗಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದುಬೈ ಹೋಲಿ ಕುರ್ ಆನ್ ಅವಾರ್ಡ್ ಕಾರ್ಯಕ್ರಮಕ್ಕೆ ಜಾಮಿಯಾ ಸಅದಿಯಾ ಇದರ ಅತಿಥಿಗಳಾಗಿ ಆಗಮಿಸಿದ ಮೂಳೂರು ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ದುಃವಾ ನೇತೃತ್ವವನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ತ್ವಾಹ ಭಾಪಕಿ ತಂಘಳ್ ವಹಿಸಿದರು. ಅಬುಧಾಬಿ ಬೃಹತ್ ಇಪ್ತಾರ್ ಕೂಟ ಸ್ವಾಗತ ಸಮಿತಿ ಚೆಯರ್ಮೆನ್ ಹಾಜಿ ಶೇಕ್ ಬಾವ ಮಂಗಳೂರು ಸ್ವಾಗತಿಸಿ, ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಹಾಜಿ.ಎಂ.ಇ. ಮೂಳೂರು ಪ್ರಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಹಾಜಿ ಅಬ್ದುಲ್ಲಾ ಮದುಮೂಲೆ, ಹಾಜಿ ಮುಹಮ್ಮದಾಲಿ ಒಳವೂರು, ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಸದಸ್ಯರಾದ ಎಸ್. ಯೂಸುಫ್ ಅರ್ಲಪದವು, ಹಾಜಿ ಹಸನಬ್ಬ ಕೊಳ್ನಾಡ್, ಹಾಜಿ ಅಬ್ದುಲ್ಲಾ ಬೀಜಾಡಿ, ಹುಸೈನ್ ಹಾಜಿ ಕಿನ್ಯ, ಅಬ್ದುಲ್ ರಹಿಮಾನ್ ಸಜಿಪ, ಅಬ್ಬಾಸ್ ಪಾಣಾಜೆ, ಕಮಲ್ ಅಜ್ಜಾವರ, ಇಸ್ಮಾಯಿಲ್ ಬಾಬಾ ಮೂಳೂರು, ಕಮರುದ್ದೀನ್ ಗುರುಪುರ, ಜಮಾಲ್ ಬಜ್ಪೆ, ಕಮಾಲುದ್ದೀನ್, ಹಸನ್ ಬಾವ ಹಳೆಯಂಗಡಿ ಹಾಗೂ ಅಬುಧಾಬಿ ಯುನಿಟ್ ನ ಹಾಜಿ ಮುಹಮ್ಮದ್ ಕುಂಞಿ ಅಡ್ಕ, ಕೆ.ಎಚ್.ಸಖಾಫಿ, ಅಬ್ದುಲ್ ಹಕೀಮ್ ತುರ್ಕಳಿಕೆ  ಮತ್ತಿತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಅಬ್ದುಲ್ ರಶೀದ್ ಹನೀಫಿ  ಹಾಗೂ ಸಾದಾತ್ ಗಳು  ಉಲಮಾ ಉಮರಾ ನೇತೃತ್ವದಲ್ಲಿ ಬದರ್ ಮೌಲೂದ್ ನಡಯಿತು. ಸ್ವಾಗತ ಸಮಿತಿ ಸಂಚಾಲಕ ಹಸೈನಾರ್ ಅಮಾನಿ ಅಜ್ಜಾವರ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News