ದಾರುಲ್ ಅಶ್ಅರಿಯ್ಯ ಜಿದ್ದಾ ಸಮಿತಿ ಪುನರ್ ರಚನೆ

Update: 2018-09-06 15:01 GMT

ಜಿದ್ದಾ,ಸೆ.6: ಜಿದ್ದಾದ ಹಯ್ಯ್ ಸಲಾಮದಲ್ಲಿ ದಾರುಲ್ ಅಶ್ಅರಿಯ್ಯ ಸುರಿಬೈಲ್ ಇದರ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸ್ವಲಾತ್ ಹಾಗೂ ವಾರ್ಷಿಕ ಸಭೆಯಲ್ಲಿ ದಾರುಲ್ ಅಶ್ಅರಿಯ್ಯ ಜಿದ್ದಾ ಸಮಿತಿಯನ್ನು ಪುನರ್ ರಚಿಸಲಾಯಿತು.

ಅಧ್ಯಕ್ಷರಾಗಿ ಹನೀಫ್ ಸಖಾಫಿ ಸಾಲೆತ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ ಅರಸಿನಮಕ್ಕಿ, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಪಡುಬಿದ್ರೆ ಮತ್ತು ಉಪಾಧ್ಯಕ್ಷರುಗಳಾಗಿ ಜಿ.ಎಂ.ಸುಲೈಮಾನ್ ಹನೀಫೀ ಪಾಣೆಮಂಗಳೂರು, ಅಬ್ಬಾಸ್ ಹಾಜಿ ಕುಕ್ಕಾಜೆ, ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಬೆದ್ರೊಡಿ, ಉಮ್ಮರ್ ಆಸೀಫ್ ರವರನ್ನು ಆಯ್ಕೆ ಮಾಡಲಾಯಿತು.

ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿದ ಮುಹಮ್ಮದ್ ಅಲಿ ಸಖಾಫಿಯವರು, ಸ್ಥಾಪನೆಯ ಪ್ರಗತಿಗಾಗಿ ನಿಷ್ಕಳಂಕವಾಗಿ ಕಾರ್ಯಚರಿಸಿ ಎಂದು ಮನವಿ ಮಾಡಿದರು. ಕೆಸಿಎಫ್ ನೇತಾರರು, ಇತರ ಸುನ್ನೀ ಸ್ಥಾಪನೆಗಳ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನೂತನ ಅಧ್ಯಕ್ಷರು ಹನೀಫ್ ಸಖಾಫಿ ಸಾಲೆತ್ತೂರು ಸ್ವಾಗತಿಸಿದರು, ಪ್ರ.ಕಾರ್ಯದರ್ಶಿ ಶಬೀರ್ ಅರಸಿನಮಕ್ಕಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News