ದುಬೈಯಲ್ಲಿ ಶಾಖೆ ತೆರೆಯಲಿರುವ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ

Update: 2018-09-17 14:52 GMT

ದುಬೈ, ಸೆ.17: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು ಇದರ ಯುಎಇ ಶಾಖೆಯ ಉದ್ಘಾಟನಾ ಸಮಾರಂಭವು ದುಬೈಯ ದೇರಾದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ  ಅ.19ರಂದು ನಡೆಯಲಿದೆ.

ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ತುಂಬೆ ಮೊಹಿದಿನ್, ಅಬ್ದುಲ್ ಲತೀಫ್, ಮುಹಮ್ಮದ್ ಮನ್ಸೂರ್ ಹಾಗೂ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಘಟನಾ/ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.  ಇದರ ಪ್ರಥಮ ಸಭೆಯು ಸೆ. 7ರಂದು ದುಬೈಯ ಬುರ್ಜ್ ಖಲೀಫಾ ರೆಸಿಡೆನ್ಸ್ ನ  ಕಾನ್ಫರೆನ್ಸ್ ಕೋಣೆಯಲ್ಲಿ ನಡೆಯಿತು. ಡಾ. ಬಿ.ಕೆ. ಯೂಸುಫ್ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇಮ್ರಾನ್ ಅಹಮದ್ ಕೀರತ್ ಪಠಿಸಿದರು. ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಎಸ್.ಎಂ.ಬಶೀರ್ ಸಭೆಯ ಬಗ್ಗೆ ವಿವರಣೆ ನೀಡಿದರು.

ಡಾ.ಬಿ.ಕೆ.ಯೂಸುಫ್, ಮುಹಮ್ಮದ್ ಅಲಿ ಉಚ್ಚಿಲ್, ಎಸ್.ಎಂ. ಬಶೀರ್ ಮತ್ತು ಅಲ್ತಾಫ್ ಖತೀಬ್ ಅವರನ್ನು ಸಂಘಟಕರಾಗಿ ನೇಮಿಸಲಾಗಿದ್ದು ಮಾತೃ ಸಂಸ್ಥೆ ಮತ್ತು ಸದಸ್ಯರ ಮಧ್ಯೆ ಸಂಪರ್ಕ ಸಾಧಿಸಲು ಮತ್ತು ಸಭೆಗಳನ್ನು ಕರೆಯಲು, ಸ್ಥಳ ನಿಗದಿ ಮಾಡಲು ಹಾಗೂ ಮುಂದಿನ ಸಭೆಗಳ ಬಗ್ಗೆ ಇಮೇಲ್/ವಾಟ್ಸ್‌ಆ್ಯಪ್ ಸಂದೇಶಗಳನ್ನು ರವಾನಿಸಲು ನೆರವಾಗಲಿದ್ದಾರೆ.

ಅಬ್ದುಲ್ಲಾ ಮದುಮೂಲೆ, ಎಂ.ಇ.ಮೂಳೂರು, ಹಿದಾಯತುಲ್ಲಾ, ಮೊಯಿದಿನ್ ಕುಟ್ಟಿ ಹಾಜಿ, ಅಲ್ತಾಫ್ ಡೈಮಂಡ್, ಅಬ್ದುಲ್ ರವೂಫ್, ತನ್ವೀರ್ ರಝಾಕ್, ಲತೀಫ್ ಮುಲ್ಕಿ, ಸಿದ್ದಿಕ್ ಉಚ್ಚಿಲ್ ಮತ್ತು ಮುಹಮ್ಮದ್ ಇಬ್ರಾಹೀಂ ನವೀದ್ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಎಸ್.ಎಂ.ಬಶೀರ್ ಧನ್ಯವಾದ ಸಮರ್ಪಿಸಿದರು. ಈ ವೇಳೆ ಹಿದಯತುಲ್ಲಾ ಅವರಿಗೆ ವಿಶೇಷ ಧನ್ಯವಾದ ತಿಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News