ಒಮಾನ್ ಬಿಲ್ಲವಾಸ್ ಕೂಟದಿಂದ ಶ್ರೀ ಸತ್ಯನಾರಾಯಣ ಪೂಜೆ

Update: 2018-10-04 17:30 GMT

ಮಸ್ಕತ್, ಅ. 4: ಒಮಾನ್ ಬಿಲ್ಲವಾಸ್ ಕೂಟದಿಂದ ದಾರ್ಸೈಟ್ ಶ್ರೀ ಕೃಷ್ಣ ದೇವಸ್ಥಾನದ ವಠಾರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ನಡೆಯಿತು. ಭಜನೆ, ಚೆಂಡೆ ವಾದನ, ಮಹಾಪೂಜೆ, ನಂತರ ಮಹಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಸಮಾಜ ಮುಖಿ ಕೆಲಸ ಮಾಡುವ ಓಮನ್ ಬಿಲ್ಲವ ಕೂಟ ಕಳೆದ ಜುಲೈ ತಿಂಗಳಲ್ಲಿ ವಾರ್ಷಿಕ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಮಾಡಿ ಸುಮಾರು ನೂರು ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News