ಯಮನ್: ಕೆಎಸ್‌ರಿಲೀಫ್ ಶಿಬಿರದ ಮೇಲೆ ದಾಳಿ; ಮಹಿಳೆ ಸಾವು

Update: 2018-10-06 17:08 GMT

 ಜಿದ್ದಾ, ಅ. 6: ಯಮನ್‌ನ ಹುದೈದಾ ಪ್ರಾಂತದ ಬಾನಿ ಜಾಬಿರ್‌ನಲ್ಲಿ ನಿರ್ವಸಿತರಿಗಾಗಿ ಸ್ಥಾಪಿಸಲಾಗಿರುವ ಶಿಬಿರದ ಮೇಲೆ ಹೌದಿ ಬಂಡುಕೋರರು ಶುಕ್ರವಾರ ನಡೆಸಿದ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.

ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ನಡೆಸುತ್ತಿರುವ ಶಿಬಿರಕ್ಕೆ ಹೌದಿ ಬಂಡುಕೋರರು ಉಡಾಯಿಸಿದ ಮೂರು ಕ್ಷಿಪಣಿಗಳು ಬಡಿದವು.

ಕ್ಷಿಪಣಿ ದಾಳಿಯನ್ನು ಖಂಡಿಸಿರುವ ಕೆಎಸ್‌ರಿಲೀಫ್, ಇದು ‘ಅತ್ಯಂತ ಹೀನ ಅಪರಾಧ’ ಎಂಬುದಾಗಿ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News