ಬ್ಯಾರೀಸ್ ಕಲ್ಚರಲ್ ಫೋರಂ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ಸನ್ಮಾನ
Update: 2018-11-13 18:24 GMT
ದುಬೈ, ನ.13: ದುಬೈಗೆ ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಯುಎಇಯ ಕರ್ನಾಟಕ ಎನ್ಆರ್ಐ ಫೋರಂ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ದೇವೇಗೌಡರಿಗೆ ಸ್ಮರಣಿಕೆ ಹಾಗೂ ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು.
ಜೆಡಿಎಸ್ ನೇತಾರ ಹಾಗೂ ಬಿಸಿಎಫ್ ಪ್ರಧಾನ ಸಲಹೆಗಾರ ಝಫರುಲ್ಲಾ ಖಾನ್, ಕೆಎನ್ಆರ್ಐ ನಿಕಟ ಪೂರ್ವ ವೈಸ್ ಚಯರ್ಪರ್ಸನ್ ಡಾ. ಆರತಿ ಕೃಷ್ಣ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಕೆಎನ್ಆರ್ಐ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲ್ತೆರೆ, ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್, ಉಪಾಧ್ಯಕ್ಷರಾದ ಎಂ.ಇ. ಮೂಳೂರು, ಅಬ್ದುಲ್ಲತೀಫ್ ಮುಲ್ಕಿ, ಪದಾಧಿಕಾರಿಗಳಾದ ಅಬ್ದುರ್ರಹ್ಮಾನ್ ಸಜಿಪ, ಯಾಕೂಬ್, ಸಮದ್ ಬೀರಾಲಿ, ಅಬ್ದುರ್ರಝಾಕ್ ಮುಟ್ಟಿಕಲ್ ಮತ್ತಿತರರು ಉಪಸ್ಥಿತರಿದ್ದರು.