ಕೆಸಿಎಫ್ ದುಬೈ ಸೌತ್ ಝೋನ್: ನ.30ಕ್ಕೆ ಬೃಹತ್ ಮೀಲಾದ್ ಸಮಾವೇಶ

Update: 2018-11-28 12:14 GMT

ದುಬೈ,ನ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ಇದರ ವತಿಯಿಂದ ಬೃಹತ್ ಮೀಲಾದ್ ಸಮಾವೇಶವು ನ.30 ರಂದು ಶುಕ್ರವಾರ ದುಬೈಯ ಬುರ್ ದುಬೈ ಹಾಲಿಡೇ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 

ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮೀಲಾದ್ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷ ಇಕ್ಬಾಲ್ ಸಿದ್ದಕಟ್ಟೆ, ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ಅವರ ಜನ್ಮ ದಿನಾಚರಣೆ ಪ್ರಯುಕ್ತ "ಓ ಸಂದೇಶವಾಹಕರೇ ತಮ್ಮೆಡೆಗೆ" ಎಂಬ ಘೋಷ ವಾಕ್ಯದಲ್ಲಿ ನಡೆಯುವ ಈ ಸಮಾರಂಭಕ್ಕೆ ಕೇರಳ ಕರ್ನಾಟಕದಲ್ಲಿ ಆಧ್ಯಾತ್ಮಿಕವಾಗಿ ಸಮೂಹಕ್ಕೆ ಅಭಯ ನೀಡುತ್ತಿರುವ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ (ಬಾಯಾರ್ ತಂಙಳ್) ರವರು ಆತ್ಮೀಯ ಉಪದೇಶ ಹಾಗೂ ದುಆ ಮಜ್ಲಿಸ್ ಗೆ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಇಕ್ಬಾಲ್ ಸಿದ್ದಕಟ್ಟೆಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಇಬ್ರಾಹೀಂ ಮುಸ್ಲಿಯಾರ್ ಕಾಯಕ್ಕೊಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಂಝ ಮಿಸ್ಬಾಹಿ ಒಟ್ಟಪದವು ರವರು ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ PMH ಅಬ್ದುಲ್ ಹಮೀದ್ ಈಶ್ವರಮಂಗಿಲ, ಅಂತರಾಷ್ಟ್ರೀಯ ಕೋಶಾಧಿಕಾರಿ ಶೇಖ್ ಬಾವ ಮಂಗಳೂರು, ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್, ಮೀಲಾದ್ ಸಮಿತಿ ನಿರ್ದೇಶಕ ಖಾದರ್ ಸಾಲೆತ್ತೂರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ಬಳಿಕ ಸಂಜೆ 5:30ಕ್ಕೆ ಶಾಹುಲ್ ಹಮೀದ್ ಸಖಾಫಿ, ಅಬ್ದುಲ್ಲ ಉಸ್ತಾದ್ ಕುಡ್ತ ಮುಗೇರು, ಅಬ್ದುಲ್ ಅಝೀಝ್ ಲತೀಫಿ ಮತ್ತು ಇಲ್ಯಾಸ್ ಮದನಿಯವರ ನೇತೃತ್ವದಲ್ಲಿ ಮೌಲಿದ್ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ಸಾರ್ ಸಖಾಫಿ ಮುಖ್ವೆ ಹಾಗೂ ಆಸಿಫ್ ಇಂದ್ರಾಜೆ ಯವಯರ ತಂಡದವರಿಂದ ಬುರ್ದಾ ಆಲಾಪನೆ, ಕೆಸಿಎಫ್ ಯುವ ಪ್ರತಿಭೆಗಳಿಂದ ದಫ್ ಪ್ರದರ್ಶನ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾ ಘೋಷ್ಠಿಯಲ್ಲಿ ಕೆಸಿಎಫ್ ಸೌತ್ ಝೋನ್ ಅಧ್ಯಕ್ಷ ಅಝೀಜ್ ಅಹ್ಸನಿ, ರಫೀಕ್ ಕಲ್ಲಡ್ಕ, ಶರೀಫ್ ಹೊಸ್ಮಾರ್ ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News