ಅಲ್-ಹಸ್ಸಾ: ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ

Update: 2018-12-01 18:13 GMT

ದಮಾಮ್, ಡಿ. 1: ಇಂಡಿಯಾ ಫ್ರೆಟರ್ನಿಟಿ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ವತಿಯಿಂದ ಸಾರ್ವಜನಿಕ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮವು ಇತ್ತೀಚೆಗೆ ಸೌದಿ ಅರೇಬಿಯದ ಆಲ್ ಹಸ್ಸಾ ಮಝ್ಹರಿಯಾದ ಜೂರಿ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಪ್ರಭಾಷಣವನ್ನು ನಡೆಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಇರ್ಷಾದ್ ಬಜ್ಪೆ ಮಾತನಾಡಿ  ಪ್ರವಾದಿ (ಸ.ಅ.) ಇಡೀ ಮನುಕುಲವನ್ನು ಸಂಸ್ಕರಣೆ ನಡೆಸಿದರು. ಆದ್ದರಿಂದ ಅವರನ್ನು ಇಂದು ಇಡೀ ಜಗತ್ತು ಮನುಕುಲದ ವಿಮೋಚಕ ಎಂದು ಕೊಂಡಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ ಅಲ್ ಹಸ್ಸಾ ವಲಯ ಅಧ್ಯಕ್ಷರಾದ ಅಶ್ಫಾಕ್ ಸಾಣೂರ್ ಸಂಘಟನೆಯು ವಿದೇಶದಲ್ಲಿ ನಡೆಸಿಕೊಂಡು ಬರುವ ಕಾರ್ಯಕ್ರಮಗಳನ್ನು ವಿವರಿಸುತ್ತಾ ಪ್ರವಾದಿ (ಸ.ಅ) ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೈಜ ಪ್ರವಾದಿ ಪ್ರೇಮಿಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಶೌಖತ್ ಮಳಲಿ, ಇಂಡಿಯಾ ಫ್ರೆಟರ್ನಿಟಿ ಫೋರಂ ದೆಹಲಿ ರಾಜ್ಯ ಅಲ್ ಹಸ್ಸಾ ವಲಯ ಅಧ್ಯಕ್ಷ ಅಬ್ದುಲ್ ಹಕೀಂ, ಇಂಡಿಯನ್ ಸೋಶಿಯಲ್ ಫೋರಂ ಅಲ್ ಹಸ್ಸಾ ವಲಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಮರವೂರ್, ಇಂಡಿಯಾ ಫ್ರೆಟರ್ನಿಟಿ ಫೋರಂ ತಮಿಳುನಾಡು ರಾಜ್ಯದ ಅಲ್ ಹಸ್ಸಾ ವಲಯ ಅಧ್ಯಕ್ಷ ಜಿನ್ನಾ, ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮಕ್ಕಳ ಹಾಡು, ಭಾಷಣ, ಕ್ವಿಝ್ ಮತ್ತು ದಫ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಸಾಕ್ ಮಲ್ಲೂರ್ ಕಿರಾಅತ್ ಪಠಿಸಿ ಚಾಲನೆ ನೀಡಿದ ಕಾರ್ಯಕ್ರಮವನ್ನು ಮನ್ಸೂರ್ ಗುರುಪುರ ನಿರೂಪಿಸಿ ಇಂಡಿಯಾ ಫ್ರೆಟರ್ನಿಟಿ ಫೋರಂ ಅಲ್ ಹಸ್ಸಾ ವಲಯ ಕಾರ್ಯದರ್ಶಿ ನಝೀರ್ ನಾರ್ಲಪದವು ಸ್ವಾಗತಿಸಿ, ನಿಝಾಮ್ ಬೆಳಪು ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News