ಪ್ರವಾದಿಯ ನಿಂದನೆ: ಅಡ್ಡೂರು ಗಲ್ಫ್ ಕಮಿಟಿ ರಿಯಾದ್ ಖಂಡನೆ

Update: 2019-01-04 18:35 GMT

ರಿಯಾದ್, ಜ. 4: 'ಸುವರ್ಣ ನ್ಯೂಸ್ ಚಾನೆಲ್’ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಿರೂಪಕ ಅಜಿತ್ ಹನುಮಕ್ಕನವರ್ ಪ್ರವಾದಿ ಮುಹಮ್ಮದ್ (ಸ.ಅ.)ರನ್ನು ನಿಂದಿಸಿದ ಪ್ರಕರಣವನ್ನು ಅಡ್ಡೂರು ಗಲ್ಫ್  ಕಮಿಟಿ ರಿಯಾದ್ ಖಂಡನೆ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಕಮಿಟಿಯ ಅಧ್ಯಕ್ಷರಾದ ಸಲಾಂ ಗೊಳಿಪಡ್ಪು, ಪ್ರವಾದಿ (ಸ.ಅ.)ರನ್ನು ನಿಂದಿಸಿ ಶಾಂತಿ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಹಾಗೂ ಧರ್ಮ-ಧರ್ಮಗಳ ಮಧ್ಯೆ ದ್ವೇಷ ಹರಡುತ್ತಿರುವ ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್, ಇಲ್ಲಿನ ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ಮೌಲ್ಯ ಮತ್ತು ಸೌಹಾರ್ದತೆಯನ್ನು ಹಾಳುಮಾಡಿ ಕೆಲ ರಾಜಕೀಯ ಪಕ್ಷಗಳಿಗೆ ಲಾಭವಾಗುವಂತೆ ಮಾಡುತ್ತಿದ್ದು, ಇಂತಹವರನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News