ದಮ್ಮಾಮ್: ಮಾ.14ರಂದು ಡಿ.ಕೆ.ಎಸ್.ಸಿ ಪರಿವಾರ ಸಮ್ಮಿಲನ

Update: 2019-03-12 17:53 GMT

ದಮ್ಮಾಮ್, ಮಾ.12: ದಕ್ಷಿಣ ಕರ್ನಾಟಕ ಸುನ್ನೀ ಕೇಂದ್ರ (ಡಿಕೆಎಸ್ ಸಿ) ಮಂಗಳೂರು ನೋಂದಾಯಿತ ಅಡಿಯಲ್ಲಿ ಕಾರ್ಯಾಚರಿಸುವ ಮರ್ಕಝ್ ತಹ್ಲೀಮುಲ್ ಇಹ್ಸಾನ್ ಮೂಲೂರ್ ಅನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಡಿಕೆಎಸ್ ಸಿ ದಮ್ಮಾಮ್ ವಲಯ ಮಾ.14ರಂದು 91-ದಮ್ಮಾಮ್ ಏರಿಯಾದ ಇಸ್ತಿರಹ ಮಲಕ್ ಅಲ್ ಲೈಲಾದಲ್ಲಿ ಪರಿವಾರ ಸಮ್ಮಿಲನ (ಫ್ಯಾಮಿಲಿ ಮುಲಾಕಾತ್) ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಧಾರ್ಮಿಕ ರಸಪ್ರಶ್ನೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಅನೇಕ ಆಸಕ್ತಿದಾಯಕ ಆಟಗಳನ್ನು ಆಡಲು ಉದ್ದೇಶಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.

ಉತ್ತಮ ಕಾರ್ಯಕ್ಕಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News