ಕೆಸಿಎಫ್ ದವಾದ್ಮಿ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

Update: 2019-04-01 12:54 GMT

ದವಾದ್ಮಿ,ಎ.1: ಗಸೀಂ ಝೋನ್ ಕೆಸಿಎಫ್ ದವಾದ್ಮಿ ಸೆಕ್ಟರ್ ಇದರ ಮಹಾಸಭೆಯು ಇತ್ತೀಚೆಗೆ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರ ಅಧ್ಯಕ್ಷತೆಯಲ್ಲಿ ಐಸಿಎಫ್ ಅಡಿಟೋರಿಯಂನಲ್ಲಿ ನಡೆಯಿತು.

ಯೂಸುಫ್ ಮದನಿ ಸುರಿಬೈಲ್ ಪ್ರಾರ್ಥನೆ ನಡೆಸಿದರು. ನ್ಯಾಶನಲ್ ಕಮಿಟಿ ಸದಸ್ಯ ಹಬೀಬ್ ಅಡ್ಡೂರ್ ಉದ್ಘಾಟನೆಯನ್ನು ನೆರವೇರಿಸಿದರು. ಯೂಸುಫ್ ಮದನಿ ಹಾಗೂ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಅವರು ವಿದ್ಯೆಯ ಮಹತ್ವ ಹಾಗೂ ರಜಬ್ ಸಂದೇಶವನ್ನು ನೀಡಿದರು. 

ನಂತರ ಗಸೀಂ ಝೋನ್ ನ ಹಬೀಬ್ ಅಡ್ಡೂರ್ ರವರ ನೇತೃತ್ವದಲ್ಲಿ ದವಾದ್ಮಿ ಸೆಕ್ಟರ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಲಾಲುದ್ದೀನ್ ಬಾಹಸನಿ ಉಳ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಚಿಕ್ಕಮಗಳೂರು, ಕೋಶಾಧಿಕಾರಿಯಾಗಿ ಉಮರ್ ಕರ್ನೂರ್ ಆಯ್ಕೆಯಾದರು. ಸಂಘಟನೆ ಇಲಾಖೆಯ ಅಧ್ಯಕ್ಷರಾಗಿ ಹಬೀಬ್ ಅಡ್ಡೂರ್, ಕಾರ್ಯದರ್ಶಿಯಾಗಿ ರಫೀಕ್ ಉರುಮಣೆ, ಶಿಕ್ಷಣ ಇಲಾಖೆಯ ಅಧ್ಯಕ್ಷರಾಗಿ, ಯೂಸುಫ್ ಮದನಿ ಸುರಿಬೈಲ್, ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಕೆ.ಸಿ ರೋಡ್, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಮಡಿಕೇರಿ, ಕಾರ್ಯದರ್ಶಿಯಾಗಿ ಕಮಾಲ್ ಕೆ.ಸಿ ರೋಡ್, ಪ್ರಕಾಶನ ಇಲಾಖೆಯ ಅಧ್ಯಕ್ಷರಾಗಿ ಇಮ್ತಿಯಾಝ್ ದೇರಳಕಟ್ಟೆ, ಕಾರ್ಯದರ್ಶಿಯಾಗಿ, ಹಮೀದ್ ಉಳ್ಳಾಲ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಸೀಫ್ ಈಶ್ವರಮಂಗಳ, ಹಮೀದ್ ಉರುಮಣೆ ಬಿಜಾದಿಯ, ಅಬ್ದುಲ್ ವಹೀದ್ ಫಾಳಿಲಿ, ಅಬ್ಬಾಸ್ ಮೊಂಟುಗೋಳಿ, ಹಸೈನಾರ್ ಸಅದಿ ಕನ್ಯಾಡಿ, ಶಮೀಮ್ ಬಿ.ಸಿ ರೋಡ್ ಇವರನ್ನು ಆಯ್ಕೆಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News