ರಿಯಾದ್‌ : ಐಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿಯಿಂದ'ಕರುನಾಡ ಸಂಭ್ರಮ 2019'

Update: 2019-11-10 17:32 GMT

ರಿಯಾದ್  : ಭಾರತೀಯ ಉತ್ಸವಗಳನ್ನು ಆಚರಿಸುವ ತನ್ನ ಸಂಪ್ರದಾಯಕ್ಕನುಗುಣವಾಗಿ ಇಂಡಿಯನ್ ಸೋಷಿಯಲ್ ಪೋರಮ್ (ಐಎಸ್‌ಎಫ್) ಕರ್ನಾಟಕ ರಾಜ್ಯ ಸಮಿತಿ ರಿಯಾದ್ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನ.14ರಂದು ರಾತ್ರಿ 9:30 ಗಂಟೆಗೆ ಇಲ್ಲಿಯ ತಾಕತ್ ವುಯೆ ರೆಸಾರ್ಟ್‌ನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ‘ಕರುನಾಡ ಸಂಭ್ರಮ 2019’ಅನ್ನು ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಐಎಸ್‌ಎಫ್ ಸದಸ್ಯರು ಮತ್ತು ಹಿತೈಷಿಗಳನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಮಿತಿ ರಿಯಾದ್‌ನ ಅಧ್ಯಕ್ಷ ಸಾಬಿತ್ ಹಸನ್ ಅವರು ಕಾರ್ಯಕ್ರಮದ ಕುರಿತು ವಿವರಗಳನ್ನು ನೀಡಿದರು.

ಸಾಮಾಜಿಕ ಜಾಗ್ರತಿ ಭಾಷಣ, ಸಾಂಸ್ಕೃತಿಕ ಚಟುವಟಿಕೆಗಳು, ಪ್ರದರ್ಶನ, ಲಘು ವಿಡಂಬನೆ, ರಸಪ್ರಶ್ನೆ ಮತ್ತು ಕ್ರೀಡೆ ಇತ್ಯಾದಿಗಳನ್ನು ಕರುನಾಡ ಸಂಭ್ರಮವು ಒಳಗೊಂಡಿರಲಿದೆ. ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟದಂತಹ ಸಾಂಪ್ರದಾಯಿಕ ಕ್ರೀಡೆಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿರಲಿವೆ ಎಂದು ಅವರು ತಿಳಿಸಿದರು.

ಐಎಸ್‌ಎಫ್ ಕೈಗೊಂಡಿರುವ ಸಮುದಾಯ ಸೇವೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನೂ ಹಸನ್ ನೀಡಿದರು. ಐಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿ ರಿಯಾದ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News