ನ. 22ರಂದು ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ ಗ್ರ್ಯಾಂಡ್ ‌ ಮೀಲಾದ್ ಸಮಾವೇಶ

Update: 2019-11-20 10:18 GMT

ಶಾರ್ಜಾ:  ಪ್ರವಾದಿ ಮುಹಮ್ಮದ್‌ ಮುಸ್ತಫಾ (ಸ.ಅ) ರವರ  ಜನ್ಮ ದಿನದ ಪ್ರಯುಕ್ತ, "ಹಬೀಬ್ (ಸ.ಅ.) ನಮ್ಮ ಜತೆಗಿರಲಿ" ಎಂಬ ಘೋಷವಾಕ್ಯದೊಂದಿಗೆನ.22 ರಂದು ಸಂಜೆ 6 ಗಂಟೆಗೆ ಶಾರ್ಜಾದ ಖಾಸಿಮಿಯಾದಲ್ಲಿರುವ ರಯಾನ್ ಹೋಟೆಲ್ ನಲ್ಲಿ ಗ್ರ್ಯಾಂಡ್‌ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕೆ.ಸಿ.ಎಫ್ ಶಾರ್ಜಾ ವಲಯದ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಕೆ‌.ಸಿ.ಎಫ್ ಯು.ಎ.ಇ. ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹಿಂ ಸಖಾಫಿ ದುಆ ನೆರವೇರಿಸಲಿದ್ದಾರೆ. ಕೆ‌.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ  ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಸಮಾರಂಭದ ಉದ್ಘಾಟನೆಗೈಯಲಿದ್ದು, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ಯು.ಟಿ. ನೌಶದ್ ಸ್ವಾಗತ ಭಾಷಣ ಮಾಡಲಿದ್ದಾರೆ. ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

 ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ತಂಙಳ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ. ಮಸ್ಊದ್ ಸಖಾಫಿ ಗೂಡಲ್ಲೂರು ಈ ಸಂದರ್ಭ ಉಪನ್ಯಾಸ ನೀಡಲಿದ್ದಾರೆ.

ಸಮಾರಂಭದಲ್ಲಿ ಶಾರ್ಜಾ ಝೋನ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ, ಮೌಲಿದ್ ಪಾರಾಯಣ, ಮನಮೋಹಕ ಬುರ್ದಾ ಆಲಾಪನೆ, ನಾತೇ ಶರೀಫ್  ನಡೆಯಲಿದ್ದು, ಸಮಾರಂಭದಲ್ಲಿ ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ನೇತಾರರು, ಉಮಾರಾ ನಾಯಕರು, ಉಲಮಾಗಳು ಭಾಗವಹಿಸುವುದಾಗಿ  ಸ್ವಾಗತ ಸಮಿತಿ ನೇತಾರರು ತಿಳಿಸಿದ್ದಾರೆ.

 ಗೋಷ್ಠಿಯಲ್ಲಿ  ನೌಶಾದ್ ಯು.ಟಿ., ಅಬೂಸ್ವಾಲಿಹ್ ಸಖಾಫಿ, ರಜಬ್ ಮಹಮ್ಮದ್, ಮುಹಮ್ಮದ್ ಹುಸೈನ್  ಇನೋಳಿ, ಕರೀಂ ಮುಸ್ಲಿಯಾರ್, ತಾಜುದ್ಧೀನ್ ಅಮ್ಮುಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News