ನಾಳೆ ಕೆಸಿಎಫ್ ಒಮಾನ್ ಬೃಹತ್ ಮೀಲಾದ್ ಕಾನ್ಫರೆನ್ಸ್

Update: 2019-11-21 12:34 GMT

ಒಮಾನ್, ನ.21: ಪ್ರವಾದಿ ಮುಹಮ್ಮದ್ (ಸ.ಅ) ಅವರ 1494 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ನ.22 ಶುಕ್ರವಾರ ಸಂಜೆ 7 ಗಂಟೆಗೆ ಅಲ್ ಮಾಸಾ ಹಾಲ್ ಮಸ್ಕತ್ ನ ರುವಿಯಲ್ಲಿ 'ಹಬೀಬ್ (ಸ.ಅ.) ನಮ್ಮ ಜತೆಗಿರಲಿ' ಎಂಬ ಘೋಷ ವಾಕ್ಯ ದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್- 2019 ನೆಡೆಯಲಿದೆ.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಎಸ್.ವೈ.ಎಸ್ ದಾವಣಗೆರೆ ಅಧ್ಯಕ್ಷ ಮೌಲಾನ ಇಬ್ರಾಹಿಂ ಸಖಾಫಿ ನೆರವೇರಿಸಲಿದ್ದಾರೆ. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಖಾರಿ ಮುಹಮ್ಮದ್‌ ರಿಯಾಝುದ್ದೀನ್ ಅಶ್ರಫಿ ಮುಂಬಯಿ ಇವರಿಂದ ನಅತೇ ಶರೀಫ್ ಮತ್ತು ಕೆಸಿಎಫ್ ಒಮಾನ್ ಕಾರ್ಯಕರ್ತರಿಂದ ಬುರ್ದ ಮಜ್ಲಿಸ್ ನಡೆಯಲಿದೆ ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಮೀಲಾದ್ ಸ್ವಾಗತ ಸಮಿತಿಯ ಚೆಯರ್ಮೆನ್ ಇಬ್ರಾಹಿಂ ಹಾಜಿ ಅತ್ರಾಡಿ ಹಾಗೂ ಕನ್ವೀನರ್ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News