ಆದೂರು ಮಜ್ಲಿಸ್ ಶಿಫಾಅ್ ವತಿಯಿಂದ ಜಿದ್ದಾದಲ್ಲಿ 'ಸ್ನೇಹ ತೀರಂ'

Update: 2019-12-02 04:49 GMT

ಜಿದ್ದಾ, ಡಿ.2: ಆದೂರು ಮಜ್ಲಿಸ್ ಶಿಫಾಅ್ ಅಸ್ಸಖಾಫತಿಲ್ ಇಸ್ಲಾಮಿಯ್ಯ ಇದರ  ಜಿದ್ದಾ ಘಟಕದ ವತಿಯಿಂದ ಮಜ್ಲಿಸ್ ‘ಸ್ನೇಹ ತೀರಂ’ ಜಿದ್ದಾದಲ್ಲಿ ನಡೆಯಿತು. ಇಂಡಿಯನ್ ಕಲ್ಚರಲ್ ಫೌಂಡೇಶನ್(ಐಸಿಎಫ್) ದಾಯಿ ಮುಸ್ತಫ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ ಮ್ಯಾಕ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಎಂ.ಡಿ. ಹಾಜಿ ಅಬ್ದುಲ್ ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಜ್ಲಿಸ್ ಎಜುಪಾರ್ಕ್ ಅಧ್ಯಕ್ಷ ಸೈಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಆದೂರು ಮುಖ್ಯ ಭಾಷಣ ನಡೆಸಿದರು. ಕಾರ್ಯಕ್ರಮದ ಮೊದಲು ಬುರ್ದಾ ಮಜ್ಲಿಸ್ ಏರ್ಪಡಿಸಲಾಗಿತ್ತು.

ಈ ವೇಳೆ ಕೆಎಂಸಿಸಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಸನ್ ಬತ್ತೇರಿ, ಮುಸ್ಲಿಂ ವೆಲ್ಫೇರ್ ಜಿದ್ದಾ ಸಮಿತಿಯ ಅಧ್ಯಕ್ಷ ಮುನೀರ್ ಮೊಗ್ರಾಲ್, ಶಿಫಾ ಮಜ್ಲಿಸ್ ಸೌದಿ ಅರೇಬಿಯಾ ಆರ್ಗನೈಸರ್  ಮುಹಮ್ಮದ್ ಕಮಾಲ್ ರಝ್ವಿ ಅಂಜದಿ ಮತ್ತಿತರರು ಉಪಸ್ಥಿತರಿದ್ದರು. ಅಶ್ರಫ್ ಎಂ.ಎಸ್ ಸ್ವಾಗತಿಸಿ ವಂದಿಸಿದರು. ಡಿ.ಕೆ.ಲತೀಫ್ ಹಾಜಿ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News