ಅಬುಧಾಬಿ: 'ಅನುಪಮಾ' ಪ್ರಧಾನ ಸಂಪಾದಕಿ ಶಹನಾಝ್ ಗೆ ಸ್ನೇಹ ಕೂಟ ವತಿಯಿಂದ ಸನ್ಮಾನ

Update: 2020-02-23 16:28 GMT

ಅಬುಧಾಬಿ: ಯುಎಇ ಸಂದರ್ಶನದಲ್ಲಿರುವ ಅನುಪಮಾ ಮಾಸಿಕದ ಪ್ರಧಾನ ಸಂಪಾದಕಿ ಮತ್ತು ಸಹನಾ ವಿಮೆನ್ಸ್ ಕೋನ್ಸಿಲಿಂಗ್ ಇದರ ಸ್ಥಾಪಕಾಧ್ಯಕ್ಷರಾದ ಶಹನಾಝ್.ಎಂ. ಅವರನ್ನು 'ಸ್ನೇಹ ಕೂಟ' ಅಬುಧಾಬಿ ವತಿಯಿಂದ ಇಂಡಿಯನ್ ಸೋಶಿಯಲ್ ಸೆಂಟರ್, ಅಬುಧಾಬಿ  ಸಭಾಂಗಣದಲ್ಲಿ ಶಾಲು ಹೊದಿಸಿ, ಸನ್ಮಾನಿಸಲಾಯಿತು.

ಸ್ನೇಹ ಕೂಟದ ಅಲ್ತಾಫ್, ಅಬ್ದುಲ್ಲಾ ಮದುಮೂಲೆ, ಅಕ್ರಮ್, ಮುಹಮ್ಮದ್ ಅನ್ಸರ್, ಸಮೀಉಲ್ಲಾ, ರಶೀದ್ ವಿ.ಕೆ. ಮತ್ತು ಮುಹಮ್ಮದ್ ಅಲಿ ಉಚ್ಚಿಲ್ ಈ ಸಂದರ್ಭ ಮಾತನಾಡಿದರು.

ಮುತ್ತಲಿಬ್, ಸುಹೈಲ್ ಕುದ್ರೋಳಿ, ಅಜ್ಮಲ್ ಜಮಾಲ್, ಇಮ್ರಾನ್ ಅಹ್ಮದ್, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್, ಅಬ್ದುಲ್ ರವೂಫ್, ನವಾಝ್ ಉಚ್ಚಿಲ್, ಮುಹಮ್ಮದ್ ತಾಹೀರ್, ಶಾಯಿದ್, ಮುಹಮ್ಮದ್ ಆರಿಫ್ , ಅಬ್ದುಲ್ ರಹ್ಮಾನ್ , ಅಬ್ದುಲ್ ರಹೀಸ್, ಇರ್ಫಾನ್ ಅಹ್ಮದ್, ಮುಹಮ್ಮದ್ ನಿಸಾರ್, ಮುಹಮ್ಮದ್ ಆಸಿಫ್ ,ಅಬ್ದುಲ್ ಸಲಾಂ, ಮುಬಾರಕ್ ಮತ್ತು ಇತರರು ಉಪಸ್ಥಿತರಿದ್ದರು.

ಶಹನಾಝ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News