ಕೋವಿಡ್ ಕುರಿತು ಇಂಡಿಯನ್ ಸೋಶಿಯಲ್ ಫೋರಂನಿಂದ ವೆಬಿನಾರ್

Update: 2020-05-30 04:33 GMT

ದಮಾಮ್, ಮೇ 30: ಇಂಡಿಯನ್ ಸೋಶಿಯಲ್ ಫೋರಂ ದಮಾಮ್, ಕರ್ನಾಟಕ ಘಟಕವು ದಮಾಮ್‌ನ ಹೆಲ್ತ್ ಕೇರ್ ಪಾಲಿ ಕ್ಲಿನಿಕ್ ಸಹಯೋಗದೊಂದಿಗೆ ಶುಕ್ರವಾರ ‘ಕೋವಿಡ್ ನೊಂದಿಗೆ ಜೀವಿಸಲು ಕಲಿಯಿರಿ’ ಎಂಬ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಝೂಮ್ ಆ್ಯಪ್‌ನಲ್ಲಿ ನಡೆದ ಈ ವೆಬಿನಾರ್‌ನಲ್ಲಿ ಸೌದಿ ಅರೇಬಿಯಾ ಪೂರ್ವ ಪ್ರಾಂತ್ಯ ಮತ್ತು ನೆರೆಯ ಪ್ರಾಂತ್ಯಗಳ ಸುಮಾರು 150ಕ್ಕೂ ಅಧಿಕ ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು.
 
ಕಾರ್ಯಕ್ರಮ ದಲ್ಲಿ ಡಾ.ಶೈಲೇಂದ್ರನಾಥ್ ವಿಷಯ ಮಂಡಿಸಿ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಇಂಡಿಯನ್ ಸೋಶಿಯಲ್ ಫೋರಂ ದಮಾಮ್, ಕರ್ನಾಟಕ ಘಟಕದ ಅಧ್ಯಕ್ಷ ಶರೀಫ್ ಜೋಕಟ್ಟೆ ಸಮಾರೋಪ ಭಾಷಣ ಮಾಡಿದರು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News