ಕತರ್ ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ಬ್ಲಾಕ್ ಸಮಿತಿ ಪದಾಧಿಕಾರಿಗಳ ಚುನಾವಣೆ

Update: 2021-10-11 07:25 GMT

ದೋಹ : ಕತರ್ ಇಂಡಿಯನ್ ಸೋಷಿಯಲ್ ಫೋರಮ್ (ಕ್ಯೂಐಎಸ್ಎಫ್) ಕರ್ನಾಟಕ ಘಟಕದ 2021-2024ನೇ ಸಾಲಿನ ದಫ್ನ ಮತ್ತು ದೋಹ ಬ್ಲಾಕ್ ಗಳ ನೂತನ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ನಡೆಯಿತು.

ದಫ್ನ ಬ್ಲಾಕ್ ಅಧ್ಯಕ್ಷರಾಗಿ ಖಲಂದರ್ ಜಲಸೂರ್, ಉಪಾಧ್ಯಕ್ಷರಾಗಿ ರಫೀಕ್ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾಗಿ ಅಫ್ರಿದಿ ಮಂಗಳೂರು ಮತ್ತು ಫಹೀಮ್ ಬಂಟ್ವಾಳ, ಸದಸ್ಯರಾಗಿ ಖಾಲಿದ್ ಬನ್ನೂರು ಹಾಗೂ ಅಬೂಬಕರ್ ಜೋಕಟ್ಟೆ ಆಯ್ಕೆಯಾದರು.

ದೋಹ ಬ್ಲಾಕ್ ಅಧ್ಯಕ್ಷರಾಗಿ ಅನ್ವರ್ ಅಂಗರಗುಂಡಿ, ಉಪಾಧ್ಯಕ್ಷರಾಗಿ ಅಶ್ರಫ್ ಗೇರುಕಟ್ಟೆ,  ಪ್ರಧಾನ ಕಾರ್ಯದರ್ಶಿಯಾಗಿ ಅತೀಖ್ ಮಡಿಕೇರಿ, ಕಾರ್ಯದರ್ಶಿಗಳಾಗಿ ಇಮ್ರಾನ್ ಸುನ್ನತ್ ಕೆರೆ ಮತ್ತು ಇಬ್ರಾಹಿಮ್ ಸುಳ್ಯ, ಸದಸ್ಯರಾಗಿ ಅನ್ವರ್ ಬೋಲ್ಯಾರ್ ಹಾಗೂ ಇರ್ಫಾನ್ ಅಡ್ಯಾರ್ ಆಯ್ಕೆಯಾದರು.

ಚುನಾವಣಾಧಿಕಾರಿ ಝಕರಿಯಾ ಪಾಂಡೇಶ್ವರ, ಅಶ್ರಫ್ ಪುತ್ತೂರು ಅವರ ಸಹಯೋಗದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು.

ನಾಯಕರ ಗುಣ ಹೇಗಿರಬೇಕು ಮತ್ತು ನಾಯಕರ ಜವಾಬ್ದಾರಿ ಏನು ಎಂಬುದರ ಬಗ್ಗೆ ದೋಹ ವಲಯಾಧ್ಯಕ್ಷರಾದ ವಝೀರ್ ಪುಂಜಾಲಕಟ್ಟೆ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ವೇದಿಕೆಯಲ್ಲಿ ದಫ್ನ ವಲಯಾಧ್ಯಕ್ಷ ಇಬ್ರಾಹಿಮ್ ಯು.ಬಿ.,  ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಾರ್ನಾಡ್, ಐಎಫ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಇರ್ಫಾನ್ ಕಾಪು ಉಪಸ್ಥಿತರಿದ್ದರು.

ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ನಝೀರ್ ಪಾಷ ಮಾತನಾಡಿ, ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯವೈಖರಿಯ ಬಗ್ಗೆ ವಿವರಿಸಿ, ನೂತನ ಪದಾಧಿಕಾರಗಳು ಸಮಾಜ ಸೇವೆಯನ್ನು ತಮ್ಮ ಪ್ರಥಮ ಗುರಿಯಾಗಿರಿಸಿ, ನಿಷ್ಪಕ್ಷಪಾತ ಜನಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಐಎಫ್ಎಫ್ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಸಲೀಂ ಬಂಗಾಡಿ, ದಫ್ನ ಮತ್ತು ದೋಹ ವಲಯಗಳ ಇತರ ಪದಾಧಿಕಾರಿಗಳಾದ  ಇರ್ಷಾದ್ ಕುಳಾಯಿ, ಅಯ್ಯೂಬ್ ಉಳ್ಳಾಲ, ಅಬೂಬಕರ್ ಸಿದ್ದೀಕ್, ಫಾರೂಕ್ ಬೋಲೆನ್ತೂರು, ಶಫೀಕ್ ಪುತ್ತೂರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಾಕಿರ್ ಪುಂಜಾಲಕಟ್ಟೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News