ದುಬೈ : ಡಿ.ಕೆ.ಎಸ್.ಸಿ. ಯು.ಎ.ಇ ಮಿಲಾದ್ ಸಮಾವೇಶ
ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ಇದರ ವತಿಯಿಂದ ದುಬೈ ರಾಫಿ ಹೋಟೆಲ್ ಆಡಿಟೊರಿಯಮ್ ನಲ್ಲಿ "ಮೀಲಾದ್ ಆಚರಣೆ, ಹುಬ್ಬುರ್ರಸೂಲ್ ಪ್ರಭಾಷಣ - ಬುರ್ದಾ ಮಜ್ಲಿಸ್" ಕಾರ್ಯಕ್ರಮ ವಿಜೃಂಭಣೆ ಯಿಂದನಡೆಯಿತು.
ಕಾರ್ಯಕ್ರಮದಲ್ಲಿ ದುವಾ ನೇತ್ರತ್ವವನ್ನು ಡಿ.ಕೆ.ಎಸ್.ಸಿ. ಯು.ಎ.ಇರಾಷ್ಟೀಯ ಸಮಿತಿ ಗೌರವಾಧ್ಯಕ್ಷರು ಜಲಾಲಿಯ ರಾತಿಬ್ ಇದರ ಯು.ಎ.ಇ. ಕಲೀಫ ರೂ ಅದ ಬಹು ಸಯ್ಯದ್ ತ್ವಾಹ ಬಾಫಕಿ ತಂಙಲ್ ನೀಡಿದರು.
ಕಾರ್ಯಕ್ರಮ ದ ಕೇಂದ್ರ ಬಿಂದು ವಾದ "ಹುಬ್ಬುರ್ರಸೂಲ್ ಪ್ರಭಾಷಣ" ವನ್ನು ಡಿ.ಕೆ.ಯಸ್.ಸಿ.ಯು.ಎ.ಇ. ರಾಷ್ಟ್ರೀಯ ಸಮಿತಿ ಸಲಹೆಗಾರರಾದ ಜನಾಬ್.ಇಬ್ರಾಹಿಂಸಖಾಫಿ ಕೆದಂಬಾಡಿ ಯವರು ತಮ್ಮ ಪ್ರಭಾಷಣದಲ್ಲಿ ಸಯ್ಯದುನಾ ಅಬೂಬಕ್ಕರ್ ಸಿದ್ದೀಕ್ (ರ.ಅ ) ಹಾಗೂ ಸಹಾಬಿ ಗಳ ಪ್ರವಾದಿ ಪ್ರೇಮ ದ ಚರಿತ್ರೆ ಯೊಂದಿಗೆಪ್ರವಾದಿ ಪ್ರೇಮವೇ ವಿಜಯಕ್ಕೆ ನಾಂದಿ . ಪ್ರವಾದಿ (ಸ.ಅ) ರವರ ಜೀವನ ಸಂದೇಶವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಇದೇಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಹಾದು ಬಂದ ದಾರಿ ಹಾಗೂ ಸಂಘಟನೆ ಯು ೨೦ ನೇ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾರ್ವಜನಿಕ ಕಾರುಣ್ಯಯೋಜನೆಯನ್ನು ಹಮ್ಮಿಕೊಳ್ಳಲು ಸೆಂಟ್ರಲ್ ಕಮಿಟಿ ತಿರ್ಮಾನಿಸಇದಕ್ಕೆ ಯು.ಎ.ಇ. ಯಿಂದ ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರವನ್ನು ನೀಡಲುತೀರ್ಮಾನಿಸಿದ್ದು ಇದಕ್ಕೆ ಎಲ್ಲರೂ ಸಹಕರಿಸುವಂತೆಯೂ ಅದೇ ರೀತಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ಇದರ ಕಟ್ಟಡ ದ ಕಾಮಗಾರಿ ನಡೆಯುತ್ತಿದ್ದು ಇದರಲ್ಲೂತಾವು ಅಥವಾ ದಾನಿಗಳನ್ನು ಸಂಪರ್ಕಿಸಲು ಸಹಕರಿಸುವಂತೆಯೂ ವಿನಂತಿಸಿದರು.
ಮಜ್ಲಿಸ್ ನಲ್ಲಿ ಜನಾಬ್.ಸಿ.ಎಚ್.ಅಬ್ದುಲ್ ರಶೀದ್ ಹನೀಫಿ ಉಸ್ತಾದ್, ಜನಾಬ್.ಮುಹಮ್ಮದ್ ರಫೀಕ್ ರಾಜಾ ಅತಾರಿ ಉಸ್ತಾದ್ ಹಾಗೂ ತಂಡದಿಂದ ಪ್ರವಾದಿಮುಹಮ್ಮದ್ (ಸ.ಅ) ರವರ ಕೊಂಡಾಡುವ ಭಕ್ತಿ ನಿರಿತ ಕವಾಲಿ, ನಾತ್ ಶರೀಪ್, ಬುರ್ದಾ ಮಜ್ಲಿಸ್ ಸಭಿಕರನ್ನು ಬೆರಗು ಗೊಳಿಸಿತು.
ಅತಿಥಿ ಭಾಷಣ ಮಾಡಿದ ಡಿ.ಕೆ.ಎಸ್.ಸಿ. ಉಮ್ ಅಲ್ ಖೈಮ್ ಯುನಿಟ್ ಗೌರವಾಧ್ಯಕ್ಷರಾದ ಜನಾಬ್.ಞಂಡಾಡಿ ಉಸ್ತಾದ್ ರವರು ತಾನು ಡಿ.ಕೆ.ಎಸ್.ಸಿ ಎಂಬಸಂಘಟನೆಯಲ್ಲಿ ಅಕರ್ಶಿತನಾಗಳು ಸಯ್ಯದ್.ಕೆ.ಎಸ್.ಆಟಕ್ಕೊಯ ತಂಙಲ್ ಕುಂಬೋಲ್ ಹಾಗೂ ಮನೆತನದ ನೇತ್ರತ್ವ ಹಾಗೂ "ಗುಂಪುಗಾರಿಕೆ ಇಲ್ಲದೆ ಸುನ್ನತ್ಜಮಾಹತ್ ನ ಆಶಯದ ಪ್ರವರ್ತಕರ ಪ್ರವರ್ತನೆ ಕಾರಣ ವಾಯಿತು. ಎಂದು ತಿಳಿಸುವುದರೊಂದಿಗೆ ದೈನಂದಿನ ಜೀವನದಲ್ಲಿ ನಬಿ (ಸ.ಅ) ರವರ ಹೆಸರಿನಲ್ಲಿಸ್ವಲಾತ್ ಅನ್ನು ಅಧಿಕರಿಸುವಂತೆ ಆವೇಶ ಭರಿತ ಮಾತಿನಿಂದ ಸಭಿಕರನ್ನು ನಬಿ (ಸ.ಅ) ಸ್ವಲಾತ್ ನಲ್ಲಿ ಮುಳುಗಿಸಿತು.
ಜನಾಬ್.ಞಂಡಾಡಿ ಉಸ್ತಾದ್, ಸಯ್ಯದ್ ತ್ವಾಹ ಬಾಫಕಿ ತಂಙಲ್, ಸಯ್ಯದ್ ಅಸ್ಗರಲಿ ತಂಙಲ್ ಕೊಳ್ಪೆ, ಜನಾಬ್.ಅಬೂಬಕ್ಕರ್ ಉಸ್ತಾದ್ಕೊಡುಂಗೈ,ಜನಾಬ್.ಸಿ.ಎಚ್.ಅಬ್ದುಲ್ ರಶೀದ್ ಹನೀಫಿ, ಜನಾಬ್.ಮುಹಮ್ಮದ್ ರಫೀಕ್ ರಾಜಾ ಅತಾರಿ, ಜನಾಬ್.ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು, ಜನಾಬ್.ಜನಾಬ್.ಅಹಮದ್ ಪೈಝಿ ಸಜಿಪ ,ಜನಾಬ್. ಅಬ್ದುಲ್ ಹಮೀದ್ ಸಖಾಪಿ ಬೆಳ್ಳಾರೆ, ಜನಾಬ್. ಅಜೀಜ್ ಲತೀಫೀ ಗಡಿಯಾರ್, ಜನಾಬ್.ಅಬ್ದುಲ್ ರಜಾಕ್ ಕಾಸಿಮಿ ಕೂರ್ನಡ್ಕ , ಜನಾಬ್.ಸಿದ್ದೀಕ್ ಮುಸ್ಲಿಯಾರ್ ಕುಂಡಡ್ಕ, ಜನಾಬ್.ಕಾಸಿಂ ಮದನಿ ತೆಕ್ಕಾರ್, ಶಾಪಿ ಸಖಾಪಿ ಕರಿಮ್ಬಿಲ ಹಾಗೂ ಇನ್ನಿತರ ಉಲಮಾ ಉಮರಾಗಳನೇತ್ರತ್ವದಲ್ಲಿ ಮೈಲೋದ್ ಮಜ್ಲಿಸ್ ಅನ್ನು ಸಂಘ್ಹಟಿಸಲಾಗಿತ್ತು.
ಸಮಾರಂಭ ದ ಅದ್ಯಕ್ಷತೆಯನ್ನು ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಅದ್ಯಕ್ಷರಾದ ಜನಾಬ್.ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ಯವರು ವಹಿಸಿಕಾರ್ಯಕ್ರಮವನ್ನು ಹಚ್ಚು ಕಟ್ಟಾಗಿ ನೆರವೇರಲು ಶ್ರಮಿಸಿದ ಮಿಲಾದ್ ಸ್ವಾಗತ ಸಮಿತಿ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು
ವೇದಿಕೆಯಲ್ಲಿ ಸಯ್ಯದ್ ಮುಕ್ತಾರ್ ಅಲ್ ಹಾದಿ ತಂಙಲ್ ಉದ್ಯಾವರ, ಸಯ್ಯದ್ ಜೈನುಲ್ ಅಬಿದೀನ್ ಸಅದಿ ಕಿನ್ಯ, ಡಿ.ಕೆ.ಎಸ್.ಸಿ ದಮಾಮ್ ವಲಯ ನೇತಾರರಾದ ಜನಾಬ್. ಅಬ್ದುಲ್ ಗಪೂರ್ ಸಜಿಪ, ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಉಪಾದ್ಯಕ್ಷರುಗಳಾದ ಜನಾಬ್. ಹಾಜಿ.ಎಂ.ಇ.ಮುಳೂರು, ಜನಾಬ್. ಅಬ್ದುಲ್ಲತೀಪ್ ಮುಲ್ಕಿ, ಜನಾಬ್. ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ, ಜನಾಬ್. ಅಬ್ದುಲ್ ರಜಾಕ್ ಹಾಜಿ ಕುತ್ತಾರ್, ಜನಾಬ್.ಅಬೂಬಕ್ಕರ್ ಉಸ್ತಾದ್ ಕೊಡುಂಗೈ,ದುಬೈ ಕೆ.ಸಿ.ಎಫ್.ಅದ್ಯಕ್ಷರಾದ ಜನಾಬ್.ಮಹಬೂಬ್ ಸಖಾಫಿ ಕಿನ್ಯ, ಜನಾಬ್.ಅಶ್ರಪ್ ಅಡ್ಯಾರ್. ಜನಾಬ್.ಸಿ.ಎಚ್.ಅಬ್ದುಲ್ ರಶೀದ್ ಹನೀಫಿ, ಜನಾಬ್.ಮುಹಮ್ಮದ್ರಫೀಕ್ ರಾಜಾ ಅತಾರಿ ಹಾಗೂ ಹಲವು ಉಲಮಾ ಉಮರಾಗಳು ಉಪಸ್ಥಿತರಿದ್ದರು
ಕಾರ್ಯಕ್ರಮ ಯಶಸ್ವಿಗೆ ಮಿಲಾದ್ ಸ್ವಾಗತ ಸಮಿತಿ ಚೈರ್ಮೆನ್ ಜನಾಬ್.ಶಕೂರ್ ಮನಿಲಾ, ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿಜನಾಬ್.ಇಕ್ಬಾಲ್ ಕಣ್ಣಂಗಾರ್, ಮಿಲಾದ್ ಸ್ವಾಗತ ಸಮಿತಿ ಸಂಚಾಲಕರಾದ ಜನಾಬ್. ಇಬ್ರಾಹಿಂ ಕಳತ್ತೂರ್, ಸದಸ್ಯರಾದ ಜನಾಬ್. ಇ.ಕೆ.ಇಬ್ರಾಹಿಂ ಕಿನ್ಯ,ಜನಾಬ್.ಕಮಲ್ ಅಜ್ಜಾವರ, ಜನಾಬ್.ಯೂಸುಫ್ ಅರ್ಲಪದವು, ಜನಾಬ್.ಇಬ್ರಾಹಿಂ ಹಾಜಿ ಕಿನ್ಯ, ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ, ಜನಾಬ್. ಅಬ್ದುಲ್ಲಮುಸ್ಲಿಯಾರ್ ಕುಡ್ತಮುಗೇರು, ಜನಾಬ್.ನವಾಜ್ ಕೊಟೆಕ್ಕಾರ್ ರವರು ಕಾರ್ಯಕ್ರಮ ವಿಜಯಗೊಳಿಸಲು ಶ್ರಮಿಸಿದರು ಹಾಗೂ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯಸಮಿತಿ ಪದಾದಿಕಾರಿಗಳು , ಯುನಿಟ್ ಪದಾದಿಕಾರಿಗಳು ಹಾಗೂ ಸುನ್ನತ್ ಜಮಾಹತ್ ನ ಸಂಘಟನೆಗಳ ನೇತಾರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಉಪಾದ್ಯಕ್ಷರಾದ ಜನಾಬ್. ಇಬ್ರಾಹಿಂ ಹಾಜಿ ಕಿನ್ಯ ರವರ ಕಿರಾಹತ್ ನೊಂದಿಗೆ ಡಿ.ಕೆ.ಎಸ್.ಸಿ.ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್ ರವರು ಸ್ವಾಗತಿಸಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಜಲಾಲಿಯ ಸಮಿತಿ ಚೈರ್ಮೆನ್ ಯಸ್.ಯೂಸುಫ್ ಅರ್ಲಪದವು ಧನ್ಯವಾದ ಸಮರ್ಪಿಸಿದರು. ಯೂತ್ ವಿಂಗ್ ನ ಜನಾಬ್.ಕಮಲ್ ಅಜ್ಜಾವರ ರವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ. ಜಬಲ್ ಅಲಿ ಯುನಿಟ್ ಹಾಗೂ ಇಂಟರ್ ನ್ಯಾಷನಲ್ ಯುನಿಟ್ ನ ಸದಸ್ಯರು ಸ್ವಯಂ ಸೇವಕರಾಗಿ ದುಡಿದು ಸಮಾರಂಭವನ್ನು ವ್ಯವಸ್ಥಿತವಾಗಿ ನಡೆಯಲು ಸಹಕರಿಸಿದರು.