ಡಿ.ಕೆ.ಎಸ್.ಸಿ 20ನೆ ಸಂಭ್ರಮಾಚರಣೆ; 'ಫ್ಯಾಮಿಲಿ ಮುಲಾಖಾತ್ 2016'
ದುಬೈ, ಫೆ.28: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಸಂಸ್ಥೆಗೆ 20 ವರ್ಷ ತುಂಬಿದ ಸಂಭ್ರಮಾಚರಣೆಯ ಪ್ರಚಾರದ ಅಂಗವಾಗಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಇದರ ಅಧೀನದಲ್ಲಿ ಇರುವ ಡಿ.ಕೆ.ಎಸ್.ಸಿ. ಯೂತ್ ವಿಂಗ್ ಸಂಘಟಿಸಿದ "ಫ್ಯಾಮಲಿ ಮುಲಾಖಾತ್ 2016" ಜರಗಿತು.
ಡಿ.ಕೆ.ಎಸ್.ಸಿ ಯುಎಇ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳಾದ ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಎಂ.ಇ ಮೂಳೂರು, ಹುಸೈನ್ ಹಾಜಿ ಕಿನ್ಯ, ಇಕ್ಬಾಲ್ ಕಣ್ಣಂಗಾರ್, ಲತೀಫ್ ಮುಲ್ಕಿ, ಇಬ್ರಾಹಿಂ ಹಾಜಿ ಕಿನ್ಯ, ಯೂಸುಫ್ ಆರ್ಲಪದವು, ಇ.ಕೆ ಇಬ್ರಾಹಿಂ ಕಿನ್ಯ, ನವಾಝ್ ಕೋಟೆಕಾರ್, ಅಬ್ದುಲ್ ರಹಿಮಾನ್ ಸಜಿಪ, ಅಬ್ದುಲ್ ಖಾದರ್ ಹಾಜಿ ಉಚ್ಚಿಲ, ಹಾಜಿ.ಅಬ್ದುಲ್ಲ ಬೀಜಾಡಿ, ಇಸ್ಮಾಯಿಲ್ ಬಾರೂದ್, ಹಂಝ ಮೂಳೂರು, ಅಬ್ದುಲ್ಲಾ ಪೆರುವಾಯಿ, ಶಕೂರ್ ಮಣಿಲ, ಹಸನಬ್ಬ ಕರ್ನಾಡ್, ಬದ್ರುದ್ದೀನ್ ಅರಂತೋಡು, ಅಶ್ರಫ್ ಸತ್ತಿಕಲ್, ಇಬ್ರಾಹಿಂ ಕಳತ್ತೂರು, ಕಮರುದ್ದೀನ್ ಗುರುಪುರ, ತಯ್ಯೆಬ್ ಹುಸೈನ್, ಇಬ್ರಾಹಿಂ ಅಗ್ನಾಡಿ ಮೊದಲಾದವರು ಉಪಸ್ಥಿತರಿದ್ದು, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಪುರುಷರಿಗಾಗಿ ವಸ್ತುಗಳ ಪತ್ತೆ ಹಚ್ಚುವಿಕೆ, ನಾಜೂಕಿನಲ್ಲಿ ಚೆಂಡು ಹೆಕ್ಕುವಂತದ್ದು, ಒಬ್ಬರಿಂದ ಒಬ್ಬರಿಗೆ ಚೆಂಡು ರವಾನೆ, ಗೋಣಿ ಚೀಲ ಓಟ, ರಸ ಪ್ರಶ್ನೆ ಸ್ಪರ್ಧೆ, ರಿಲೇ ಓಟ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇವುಗಳಲ್ಲಿ ನಾಜೂಕಿನಲ್ಲಿ ಚೆಂಡು ಹೆಕ್ಕುವ ಸ್ಪರ್ಧೆಯಲ್ಲಿ ಆರೆಂಜ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಗ್ರೀನ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಅದೇ ರೀತಿ ಹಗ್ಗ ಜಗ್ಗಾಟದಲ್ಲಿ ಕೂಲ್ ವ್ಯಾಲಿ ಪ್ರಥಮ ಸ್ಥಾನ ಪಡೆದರೆ, ಕಬಡ್ಡಿಯಲ್ಲಿ ಆರೆಂಜ್ ತಂಡ ದ್ವಿತಿಯ ಸ್ಥಾನ ಪಡೆದುಕೊಂಡಿತು.
ಚೆಂಡು ರವಾನೆ ಸ್ಪರ್ಧೆಯಲ್ಲಿ ನಾಸಿರ್ ಪಟೇಲ್ ಪ್ರಥಮ, ರಫೀಕ್ ಸತ್ತಿಕಲ್ ದ್ವಿತೀಯ. ಗೋಣಿ ಚೀಲ ಓಟದಲ್ಲಿ ಸಮ್ರಾನ್ ಪ್ರಥಮ, ಅಬ್ದುಲ್ ರೌಫ್ ದ್ವಿತೀಯ. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸಜ್ಜಾದ್ ಪಟೇಲ್, ಮುಹಮ್ಮದ್ ಆದಿಲ್, ನೂರು ಮುಹಮ್ಮದ್ ಜೆಪ್ಪು, ಮಹಮ್ಮದ್ ಇಕ್ಬಾಲ್ ಮಂಜನಾಡಿ, ಇಬ್ರಾಹಿಂ ದುಬಾಲ್, ರಿಲೇ ಓಟದಲ್ಲಿ ಪ್ರಥಮ ಕೂಲ್ ವ್ಯಾಲಿ ತಂಡ, ದ್ವಿತೀಯ ಗ್ರೀನ್ ತಂಡ ಪಡೆದುಕೊಂಡಿತು. ಒಟ್ಟು ಸ್ಪರ್ಧೆಯಲ್ಲಿ ಕೂಲ್ ವ್ಯಾಲಿ ತಂಡ ಅತ್ಯುತ್ತಮ ತಂಡವಾಗಿ ಆಯ್ಕೆಗೊಂಡಿತು.
ಮಹಿಳೆಯರಿಗಾಗಿ ಇಸ್ಲಾಮಿಕ್ ಕ್ವಿಝ್, ಬಾಲ್ ಪಾಸಿಂಗ್, ಚಮಚದಲ್ಲಿ ನಿಂಬೆ, ಆರೆಂಜ್ ಸ್ಪೀಡಿ, ಬಾಟಲಿಗೆ ನೀರು ತುಂಬಿಸುವುದು, ಪೇಪರ್ ಮೇಲೆ ನಡೆತ, ಖೋ ಖೋ, ನೇರ ಪ್ರಶ್ನೆ ನೇರ ಉತ್ತರ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳನ್ನುಮಹಿಳಾ ಗುಂಪಿನ ಪ್ರಮುಖರು ನಿರ್ವಹಿಸಿದರು.ಮಕ್ಕಳಿಗೆ ವಿವಧ ಸ್ಪರ್ಧೆಗಳು ನಡೆಸಲಾಗಿತ್ತು.
ತೀರ್ಪುಗಾರರಾಗಿ ರಫೀಕ್ ಮುಲ್ಕಿ, ಅಕ್ಬರ್ ಸುರತ್ಕಲ್, ಇ.ಕೆ ಕಿನ್ಯ, ಇಕ್ಬಾಲ್ ಕಣ್ಣಂಗಾರ್, ಮುಖ್ತಾರ್ ಅರಂತೋಡು, ಸೈಫುದ್ದೀನ್ ಪಟೇಲ್, ನವಾಝ್ ಕೋಟೆಕಾರ್ ಸಹಕರಿಸಿದರು. ಸ್ವಯಂ ಸೇವಕರಾಗಿ ಜಮಾಲ್ ಬಜ್ಪೆ, ಝುಬೈರ್ ಆತೂರು, ಇಬ್ರಾಹಿಂ ಕಳತ್ತೂರು, ಶೇಕಬ್ಬ ಕಿನ್ಯ, ಅಬ್ದುಲ್ ರಹಿಮಾನ್ ಪೈಂಬಚ್ಚಾಲ್, ಮುಸ್ತಾಕ್ ಅಹ್ಮದ್ ಕಿನ್ಯ, ನವಾಝ್ ಕಿನ್ಯ, ಶರೀಫ್ ಆರ್ಲಪದವು, ರಫೀಕ್ ಸತ್ತಿಕಲ್, ರಿಯಾಝ್ ಕಿನ್ಯ, ಸಜ್ಜಾದ್ ಅರಂತೋಡು ಮೊದಲಾದವರು ಸಹಕರಿಸಿದ್ದರು.
ಮಹಿಳೆಯರ ಕಾರ್ಯಕ್ರಮದ ತೀರ್ಪುಗಾರರಾಗಿ ಹಾಗೂ ಸ್ವಯಂ ಸೇವಕರಾಗಿ ಮಿಸೆಸ್ ಇಕ್ಬಾಲ್ ಹೆಜಮಾಡಿ, ಮಿಸೆಸ್ ಮುಕ್ತಾರ್ ಅರಂತೋಡು, ಮಿಸೆಸ್ ಅಶ್ರಪ್ ಸತ್ತಿಕಲ್, ಮಿಸೆಸ್ ಅಬ್ದುಲ್ ರಹಿಮಾನ್ ಸಜಿಪ, ಮಿಸೆಸ್ ಇಬ್ರಾಹಿಂ ಅಗ್ನಾಡಿ, ಮಿಸೆಸ್ ರಹೀಮ್ ಕೋಡಿ, ಮಿಸೆಸ್ ಕಮಲ್ ಅಜ್ಜಾವರ, ಮಿಸೆಸ್ ಸೈಪುದ್ದೀನ್ ಪಟೇಲ್ ಸಹಕರಿಸಿದರು.
ಮುಹಮ್ಮದ್ ದೆಂಜಿಪ್ಪಾಡಿ, ಆಸಿಫ್ ಕಣ್ಣಂಗಾರ್, ಅಬ್ದುಲ್ ರಹ್ಮಾನ್ DEWA, ರಝಾಖ್ ಹಾಜಿ ಜೆಲ್ಲಿ, ಸುಲೈಮಾನ್ ಹಾಜಿ ಕಣ್ಣಂಗಾರ್, ಉಸ್ಮಾನ್ ಮೂಳೂರ್ ಮೊದಲಾದ ಪ್ರಮುಖರು ಆಗಮಿಸಿದ್ದರು.
ಡಿ.ಕೆ.ಎಸ್.ಸಿ ಅಜ್ಮಾನ್ ಘಟಕದ ಪ್ರಧಾನ ಕಾರ್ಯದರ್ಶಿ ಆದಂ ಈಶ್ವರಮಂಗಿಲರಿಗೆ ಉಚಿತ ಉಮ್ರಾ ಯಾತ್ರೆ
ಫ್ಯಾಮಿಲಿ ಮುಲಾಖಾತ್ 2016 ಕಾರ್ಯಕ್ರಮಕ್ಕೆ ನೊಂದಾವಣಿ ಮಾಡಿಕೊಂಡವರಲ್ಲಿ ಒಬ್ಬರ ಕ್ರಮ ಸಂಖ್ಯೆಯನ್ನು ಚೀಟಿ ಎತ್ತುವ ಮೂಲಕ ಉಚಿತ ಉಮ್ರಾ ಯಾತ್ರೆಗೆ ಆಯ್ಕೆ ಮಾಡಲಾಯಿತು. ಅದು ಈಶ್ವರಮಂಗಿಲ ಆದಂ ಅವರಿಗೆ ಲಭಿಸಿತು. ಈ ವೇಳೆ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ ಕೂಲ್ ವ್ಯಾಲಿ ಕಂಪೆನಿಗೆ ಹಾಗೂ ವಿಶ್ವ ಕನ್ನಡಿಗ ನ್ಯೂಸ್ ನ ರಫೀಕ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತಯನ್ನು ಫ್ಯಾಮಿಲಿ ಮುಲಾಖಾತ್ 2016 ಇದರ ಸ್ವಾಗತ ಸಮಿತಿ ಚೇರ್ಮನ್ ಸೈಫುದ್ದೀನ್ ಪಟೇಲ್ ವಹಿಸಿದ್ದರು. ಈ ವೇಳೆ ಡಿ.ಕೆ.ಎಸ್.ಸಿ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಮಾಹಿತಿ ನೀಡಿದರು.
ಮಾಸ್ಟರ್ ಆದಿಲ್ ಅಬ್ದುಲ್ಲ ಪೆರುವಾಯಿ ಕಿರಾಅತ್ ಪಠಿಸಿ, ಡಿ.ಕೆ.ಎಸ್.ಸಿ ನಾಯಕರು ಬೆಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಿ.ಕೆ.ಎಸ್.ಸಿ ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಕಮಾಲ್ ಅಜ್ಜಾವರ ಅವರು ಡಿ.ಕೆ.ಎಸ್.ಸಿ ಯೂತ್ ವಿಂಗ್ ಇದರ ಕಿರು ಪರಿಚಯ ದೊಂದಿಗೆ ಸ್ವಾಗತಿಸಿದರೆ ಅಕ್ಬರ್ ಸುರತ್ಕಲ್ ಅವರು ಸ್ವಾಗತ ಹಾಡು ಹಾಡುವ ಮೂಲಕ ಎಲ್ಲರನ್ನು ಸ್ವಾಗತಿಸದರು. ಮುಖ್ತಾರ್ ಅರಂತೋಡು ಹಾಗೂ ರಿಯಾಝ್ ಕಿನ್ಯ ಕಾರ್ಯಕ್ರಮ ನಿರ್ವಹಿಸಿದರು.