ನೆಹರೂ ಛಾಪು ಅಳಿಸಲು ಬಿಜೆಪಿ ಹುನ್ನಾರ ಅವರಿರದ್ದಿದ್ದರೆ ಭಾರತದ ಸ್ಥಿತಿ?
ನೆಹರೂ ಅವರನ್ನು ದೂಷಿಸುವ ದೊಡ್ಡ ಸಮೂಹ ಸೈಬರ್ ಜಾಲದಲ್ಲಿ ಇರುವುದನ್ನು ‘ಸಂಡೇ ಟೈಮ್ಸ್ ಆ್ ಇಂಡಿಯಾ’ದಲ್ಲಿ ಬರೆದ ಲೇಖನದಲ್ಲಿ ಅಮೂಲ್ಯ ಗೋಪಾಲಕೃಷ್ಣನ್ ಗಮನಕ್ಕೆ ತಂದಿದ್ದರು. ರಾಜಸ್ಥಾನದಲ್ಲಿ ಭಾರತದ ಮೊದಲ ಪ್ರಧಾನಿಯನ್ನು ಶಾಲೆಗಳಿಂದ ಅಳಿಸಿ ಹಾಕಲಾಗಿದೆ. ಏಕೆಂದರೆ ಹಲವು ಅಂಶಗಳನ್ನು ದೃಢೀಕರಿಸಿ, ಪರಾಮರ್ಶಿಸಿ, ವಿಮರ್ಶೆಗಳಲ್ಲಿ ಆಧರಿಸಿ ಒಂದು ಶೈಕ್ಷಣಿಕ ಸಂಪುಟದಲ್ಲಿ ಬರೆಯುವುದಕ್ಕಿಂತ ಪಠ್ಯಪುಸ್ತಕಗಳ ಮೂಲಕ ವಂಚಿಸುವುದು ಸುಲಭ.
ಆದರೆ ನೆಹರೂ ಇಲ್ಲದಿದ್ದರೆ ಭಾರತ ಏನಾಗುತ್ತಿತ್ತು?
ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಮೇರು ವ್ಯಕ್ತಿಗಳನ್ನು ಒಬ್ಬರಿಂದ ಮತ್ತೊಬ್ಬರ ನಡುವೆ ಪ್ರತ್ಯೇಕಿಸುವುದು ಕಷ್ಟಸಾಧ್ಯ. ಆದರೆ ಕೆಲ ನಿರ್ದಿಷ್ಟ ವಿಷಯಗಳಿಗೆ ಸಂಬಂಸಿದಂತೆ ಒಬ್ಬ ಮುಖಂಡನ ವ್ಯಕ್ತಿತ್ವ ವಿಭಿನ್ನ ಪಾತ್ರವನ್ನು ನಿರ್ವಹಿಸಿರುವುದು ವೇದ್ಯವಾಗುತ್ತದೆ. ನೆಹರೂ ವ್ಯಕ್ತಿತ್ವ ಅಂಥದ್ದು. ನೆಹರೂ ಇಲ್ಲದ ಭಾರತದಲ್ಲಿ ಪ್ರಮುಖವಾಗಿ ಎಂಟು ಅಂಶಗಳ ಆಧಾರದಲ್ಲಿ ಪರಿಗಣಿಸಬಹುದು.
ಮೊದಲನೆಯದಾಗಿ 1927ರಲ್ಲಿ ಅವರು ಬ್ರುಸೆಲ್ಸ್ನಲ್ಲಿ ತುಳಿತಕ್ಕೊಳಗಾದ ರಾಷ್ಟ್ರೀಯತೆಯವರ ಸಮಾವೇಶದಲ್ಲಿ ಪಾಲ್ಗೊಂಡು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಂತಾರರಾಷ್ಟ್ರೀಯ ದೃಷ್ಟಿಕೋನವನ್ನು ತಂದುಕೊಟ್ಟರು. ಅವರ ಸಾಮ್ರಾಜ್ಯಶಾಹಿ ವಿರೋ, ವಿಶಾಲ ದೃಷ್ಟಿಕೋನ ಖಂಡಿತವಾಗಿಯೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಆಧುನಿಕ ಲೇಪವನ್ನು ನೀಡಿದ್ದು ಸುಳ್ಳಲ್ಲ.
ಎರಡನೆಯದಾಗಿ 1928ರಲ್ಲಿ ಗಾಂಧೀಜಿ ಭಾರತಕ್ಕೆ ಪ್ರಭುತ್ವದ ಸ್ಥಾನಮಾನಕ್ಕೆ ಪ್ರಸ್ತಾವ ಮುಂದಿಟ್ಟರು. ಆದರೆ ನೆಹರೂ ಸಂಪೂರ್ಣ ಸ್ವಾತಂತ್ರ್ಯಕ್ಕೆ ಪಟ್ಟುಹಿಡಿದರು. ಈ ಕಾರಣದಿಂದ ಅವರು, ಜನಸಾಮಾನ್ಯರಿಂದ ಆಯ್ಕೆ ಮಾಡಲ್ಪಟ್ಟ ಶಾಸಕಾಂಗ ಬೇಕು ಎಂಬ ಸಲುವಾಗಿ 1935ರ ಭಾರತ ಸರಕಾರದ ಕಾಯ್ದೆಯನ್ನು ವಿರೋಸಿದರು. ಇವರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡೇ ಐತಿಹಾಸಿಕ ವಸ್ತುನಿಷ್ಠ ನಿರ್ಣಯವನ್ನು 1946ರ ಡಿಸೆಂಬರ್ 13ರಂದು ಮಂಡಿಸಲಾಯಿತು. ಭಾರತಕ್ಕೆ ಪ್ರಭುತ್ವದ ಸ್ಥಾನಮಾನ ನೀಡುವ ಬ್ರಿಟಿಷ್ ಹುನ್ನಾರದ ವಿರುದ್ಧ ಈ ನಿರ್ಣಯದ ಅನ್ವಯ ಭಾರತವನ್ನು ಸ್ವಾತಂತ್ರ್ಯ, ಸಂಪೂರ್ಣ ಸಾರ್ವಭೌಮ ಪ್ರಜಾಪ್ರಭುತ್ವ ದೇಶವಾಗಿ ಪರಿವರ್ತಿಸಲು ಆಗ್ರಹಿಸಲಾಯಿತು.
ಮೂರನೆಯದಾಗಿ, ಇದು ಬಹುಶಃ ಅತ್ಯಂತ ಒಳಸಂಚಿನ ನಿದರ್ಶನ ಎನ್ನಬಹುದು. 1947ರ ಮೇ ತಿಂಗಳಲ್ಲಿ ಲಾರ್ಡ್ ವೌಂಟ್ಬ್ಯಾಟನ್ ಅವರು, ಭಾರತದಲ್ಲಿ ಪ್ರಾಂತಗಳಿಗೆ ಅಕಾರ ನೀಡುವ ಯೋಜನೆಯೊಂದನ್ನು ಕಳುಹಿಸಿದರು. ಇದರ ಅನ್ವಯ ಮುಂಬೈ, ಮದ್ರಾಸ್, ಉತ್ತರ ಪ್ರದೇಶ ಹಾಗೂ ಬಂಗಾಳ ಪ್ರತ್ಯೇಕವಾಗಿ ಒಕ್ಕೂಟಗಳನ್ನು ರಚಿಸಿಕೊಂಡರೆ, ಅವುಗಳಿಗೆ ಅಕಾರ ಹಸ್ತಾಂತರ ಮಾಡುವುದು ವೌಂಟ್ಬ್ಯಾಟನ್ ಅವರ ಯೋಜನೆಯಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹಲವು ಉತ್ತರಾಕಾರಿ ರಾಜ್ಯಗಳನ್ನು ಬ್ರಿಟಿಷ್ ಇಂಡಿಯಾದಲ್ಲಿ ವಿಲೀನಗೊಳಿಸುವ ಸಾಧ್ಯತೆಯನ್ನು ಮುಕ್ತಗೊಳಿಸುವುದು ಈ ನಿರ್ಧಾರದ ಹಿಂದಿನ ಹುನ್ನಾರ. ಈ ಯೋಜನೆಗೆ ಬ್ರಿಟಿಷ್ ಕ್ಯಾಬಿನೆಟ್ ಅನುಮೋದನೆ ನೀಡಿ, 1947ರ ಮೇ ತಿಂಗಳಲ್ಲಿ ವೌಂಟ್ಬ್ಯಾಟನ್ಗೆ ಕಳುಹಿಸಿಕೊಟ್ಟಿತು. ಈ ಯೋಜನೆಯನ್ನು ಘೋಷಿಸಲು ಭಾರತದ ಮುಖಂಡರ ಜತೆ ಸಭೆ ನಡೆಸುವ ಮುನ್ನಾ ದಿನ ವೌಂಟ್ಬ್ಯಾಟನ್ ಅವರು ಈ ಯೋಜನೆಯನ್ನು ತಮ್ಮ ಶಿಮ್ಲಾ ನಿವಾಸಕ್ಕೆ ಅತಿಥಿಯಾಗಿ ಆಗಮಿಸಿದ್ದ ನೆಹರೂ ಅವರಿಗೆ ತೋರಿಸಿದರು.
ಇದರಿಂದ ದಿಗ್ಭಾ†ಂತರಾದ ನೆಹರೂ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಇದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿ ವೈಸರಾಯ್ಗೆ ಸುದೀರ್ಘ ಪತ್ರ ಬರೆದರು. ಇದು ದೇಶವನ್ನು ಛಿದ್ರಗೊಳಿಸುವ ಹುನ್ನಾರ ಎಂದು ಪತ್ರದಲ್ಲಿ ಪ್ರತಿಪಾದಿಸಿದರು. ತಮ್ಮ ಟಿಪ್ಪಣಿಯಲ್ಲಿ ನೆಹರೂ ಹಲವು ಪ್ರಸ್ತಾವಗಳ ವಿರುದ್ಧ ಧ್ವನಿ ಎತ್ತಿದ್ದಲ್ಲದೇ, ಬಲೂಚಿಸ್ತಾನಕ್ಕೆ ಸ್ವಾಯತ್ತತೆ ನೀಡುವ ಪ್ರಸ್ತಾವವನ್ನೂ ವಿರೋಸಿದರು. ವೌಂಟ್ಬ್ಯಾಟನ್ ಅವರು ಈ ಘೋಷಣೆಯನ್ನು ಮುಂದೂಡಿದ್ದಲ್ಲದೇ, ಬಳಿಕ ವಿ.ಪಿ.ಮೆನನ್ ಅವರು ಸಿದ್ಧಪಡಿಸಿದ ಯೋಜನೆಯಂತೆ ಭಾರತವನ್ನು ವಿಭಜಿಸಿ, ಎರಡು ದೇಶಗಳಿಗೆ ಅಕಾರವನ್ನು ಹಂಚಿಕೆ ಮಾಡುವ ಸೂತ್ರವನ್ನು ಘೋಷಿಸಲಾಯಿತು. ಇದರಲ್ಲಿ ನೆಹರೂ ಪಾತ್ರದ ಬಗ್ಗೆ ಕೆಲ ಸಂದೇಹಗಳಿರಬಹುದು. ಮೆನನ್ ಅವರ ಅಕಾರ ಹಸ್ತಾಂತರ ಸೂತ್ರದಲ್ಲಿ ವಿವರಿಸಿದಂತೆ, ವೌಂಟ್ಬ್ಯಾಟನ್ ಅವರು ಭಾರತಕ್ಕೆ ಮಾರಕವಾಗಬಹುದಾದ ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡಿತು.
ಒಕ್ಕೂಟ ವ್ಯವಸ್ಥೆಗೆ ಬಲ
ನಾಲ್ಕನೆಯದಾಗಿ ಪ್ರಧಾನಿಯಾಗಿ, ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಇಷ್ಟಾಗಿಯೂ ಅವರ ಅಧ್ಯಕ್ಷತೆಯ ಒಕ್ಕೂಟ ಸಂವಿಧಾನ ಸಮಿತಿ ಹಾಗೂ ಕೇಂದ್ರದ ಅಕಾರ ಸಮಿತಿಯು ರಾಜ್ಯಗಳು ಹಾಗೂ ಕೇಂದ್ರ ಸರಕಾರದ ನಡುವಿನ ಅಕಾರವನ್ನು ನಿರ್ಧರಿಸುವಲ್ಲಿ ಮತ್ತು ಸಮತೋಲನ ತರುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಈ ವೈವಿಧ್ಯಮಯ ಸಂಸ್ಕೃತಿ ಹಿನ್ನೆಲೆಯ ದೇಶದಲ್ಲಿ ಏಕತೆಯನ್ನು ಉಳಿಸುವಲ್ಲಿ ಇದು ಮಹತ್ವದ್ದಾಗಿತ್ತು. ಆದರೆ ಅವರ ರಾಜಕೀಯ ದೃಷ್ಟಿಕೋನ ಹಾಗೂ ಸಿದ್ಧಾಂತ ಅದರಲ್ಲೂ ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗೆಗೆ ಅವರಿಗೆ ಇದ್ದ ನಂಬಿಕೆಯ ವಿಚಾರದಲ್ಲಿ ಯಾವ ಅನುಮಾನಗಳೂ ಇಲ್ಲ ಎನ್ನುವುದು ದಾಖಲೆಯಲ್ಲಿ ಪ್ರತಿಲನಗೊಂಡಿದೆ. ಇದರಲ್ಲಿ ಜಾತ್ಯತೀತ ಎಂಬ ಪದದ ಉಲ್ಲೇಖ ಇಲ್ಲದಿದ್ದರೂ, ಆ ಅರ್ಥವನ್ನು ನೀಡುವಂತಿತ್ತು. ಸಂವಿಧಾನದ ಮುಖ್ಯವಾದ ದೃಷ್ಟಿ ಜಾತಿ, ಸಮುದಾಯ ಹಾಗೂ ಧರ್ಮದ ಎಲ್ಲೆಯನ್ನು ಮೀರುವುದಾಗಿತ್ತು.
ಐದನೆಯದಾಗಿ ಜಮ್ಮು- ಕಾಶ್ಮೀರ ವಿಚಾರವನ್ನು ನೆಹರೂ ನಿರ್ವಹಿಸಿದ ವಿಧಾನಕ್ಕಾಗಿ ಅವರನ್ನು ಹಲವು ಮಂದಿ ಟೀಕಿಸುವವರಿದ್ದಾರೆ. ಆದರೆ ಟೀಕಾಕಾರರಿಗೆ ಅರ್ಥವಾಗದ ವಾಸ್ತವವೆಂದರೆ, ಶೇಖ್ ಅಬ್ದುಲ್ಲಾ ಅವರ ಜತೆಗೆ ನೆಹರೂ ಅವರಿಗಿದ್ದ ಸಂಬಂಧದಿಂದಾಗಿ ಕನಿಷ್ಠ 1952ರವರೆಗೆ, ಕಾಶ್ಮೀರವನ್ನು ಭಾರತದ ಒಕ್ಕೂಟದಲ್ಲಿ ಉಳಿಸಿಕೊಳ್ಳುವುದೇ ಕಷ್ಟಕರವಾಗಿತ್ತು.
ಆರನೆಯದಾಗಿ, ನೆಹರೂ ಸಾರ್ವಜನಿಕ ಹಾಗೂ ಖಾಸಗಿ ವಲಯದ ಸಮತೋಲಿತ ಆರ್ಥಿಕತೆಯ ಮಾದರಿಯನ್ನು ಪ್ರತಿಪಾದಿಸಿದರು. ಇದು ಮುಂಬೈ ಯೋಜನೆಯ ಅನ್ವಯ ಭಾರತದ ಕೈಗಾರಿಕೋದ್ಯಮಿಗಳು ಮುಂದಿಟ್ಟ ಪ್ರಸ್ತಾವಕ್ಕೆ ಅನುಗುಣವಾಗಿತ್ತು. ಅವರ ಸಮಾಜವಾದಿ ಚಿಂತನೆಯ ಒಲವನ್ನು ಟೀಕಿಸುವವರು ಅರ್ಥಮಾಡಿಕೊಳ್ಳಬೇಕಾದ ವಿಚಾರವೆಂದರೆ, ಕನಿಷ್ಠ 1950ರ ದಶಕದ ವರೆಗೆ ದಂಗೆಕೋರ ಕಮ್ಯುನಿಸ್ಟ್ವಾದಿಗಳು ದೇಶದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮಾಜವಾದಿ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ಅವರು ಕಮ್ಯುನಿಸ್ಟ್ ಚಳವಳಿಯ ವಿಭಜನೆಗೆ ಕಾರಣರಾದರು ಮತ್ತು ಅವರ ಮನವಿಯನ್ನು ದಿಕ್ಕುತಪ್ಪಿಸಿದರು.
ಏಳನೆಯದಾಗಿ, ನೆಹರೂ ನಾಲ್ಕು ಪ್ರಮುಖ ಹಿಂದೂ ಸಂಹಿತೆ ಮಸೂದೆಗಳ ಅನುಮೋದನೆಗೆ ಕಾರಣರಾದರು. ಇದು ಅತ್ಯಂತ ಪ್ರಗತಿಪರ ಹಾಗೂ ಸಮುದಾಯದ ಸುಧಾರಣೆಗೆ ದೀರ್ಘಾವ ಪರಿಣಾಮ ಬೀರುವ ಮಸೂದೆಗಳಾಗಿದ್ದವು. ಇವುಗಳನ್ನು ಸಂವಿಧಾನ ರಚನಾ ಸಮಿತಿಯಲ್ಲೇ ಪ್ರಸ್ತಾಪಿಸಲಾಗಿತ್ತಾದರೂ, ಸಂಪ್ರದಾಯವಾದಿಗಳು ಹಾಗೂ ಹಿಂದೂ ರಾಷ್ಟ್ರೀಯವಾದಿಗಳು ಇವುಗಳನ್ನು ಕಟುವಾಗಿ ಟೀಕಿಸಿ, ವಿರೋಸಿದ್ದರು. ಇದರ ಹಿಂದಿದ್ದ ವ್ಯಕ್ತಿ ಹಿಂದುತ್ವವನ್ನು ತಿರಸ್ಕರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದರೂ, ಮೊದಲ ಸಂಸತ್ತಿನಲ್ಲಿ ಇದು ಅನುಮೋದನೆಗೊಳ್ಳುವಲ್ಲಿ ನೆಹರೂ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಆಧುನೀಕರಣವು ಹಿಂದೂ ಸಮಾಜದ ಬಹುತೇಕ ದಮನಕಾರಿ ಆಯಾಮಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಆರೆಸ್ಸೆಸ್ ಮತ್ತು ಸಹ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಇತರ ಹಲವು ಅಂಶಗಳ ಜತೆಗೆ ಈ ಮಸೂದೆಯ ಅನ್ವಯ ಬಹುಪತ್ನಿತ್ವವನ್ನು ಕಿತ್ತುಹಾಕಲಾಯಿತು; ಅಂತರ್ಜಾತಿ ವಿವಾಹಗಳಿಗೆ ಅವಕಾಶ ಮಾಡಿಕೊಟ್ಟಿತು; ವಿಚ್ಛೇದನ ಪ್ರಕ್ರಿಯೆಯನ್ನು ಸರಳಗೊಳಿಸಲಾಯಿತು ಹಾಗೂ ಆಸ್ತಿ ಹಕ್ಕಿನ ವಿಚಾರಕ್ಕೆ ಬಂದಾಗ ಹೆಣ್ಣುಮಕ್ಕಳು ಕೂಡಾ ಗಂಡುಮಕ್ಕಳಷ್ಟೇ ಸಮಾನ ಹಕ್ಕು ಹೊಂದಿದ್ದಾರೆ ಎನ್ನುವುದನ್ನು ಪ್ರತಿಪಾದಿಸಿತು.
ಎಂಟನೆಯದಾಗಿ, ನೆಹರೂ ಅವರ ವೈಯಕ್ತಿಕ ಛಾಪು, ದೇಶದ ಅಣ್ವಸ ಹಾಗೂ ಬಾಹ್ಯಾಕಾಶ ಯೋಜನೆಗಳಲ್ಲಿ ಕೂಡಾ ಸ್ಪಷ್ಟವಾಗಿ ಗೋಚರವಾಗುತ್ತದೆ. ಭಾರತದ ಅಣುವಿಜ್ಞಾನದ ಜನಕ ಎಂದೇ ಕರೆಯಲಾಗುವ ಹೋಮಿ ಬಾಬಾ, 1939ರಲ್ಲಿ ಇಂಗ್ಲೆಂಡಿನಿಂದ ವಾಪಸ್ಸಾಗಿ ನೆಹರೂ ಅವರನ್ನು ಭೇಟಿ ಮಾಡಿದರು. ಈ ಸಂಬಂಧ ದೀರ್ಘಾವಯಲ್ಲೂ ಬೆಳೆದುಬಂತು. ನೆಹರೂ ಅವರು ಬಾಬಾಗೆ ಇಡೀ ದೇಶದ ಅಣು ಯೋಜನೆಗಳ ಹೊಣೆಗಾರಿಕೆ ವಹಿಸಿಕೊಟ್ಟರು ಮತ್ತು ಅವರು ನೇರವಾಗಿ ಪ್ರಧಾನಿಗಷ್ಟೇ ವರದಿ ಮಾಡುವಷ್ಟರ ಮಟ್ಟಿಗೆ ಈ ಮೇರು ವಿಜ್ಞಾನಿಗೆ ಅಕಾರ ನೀಡಿದರು. ಅವರು ಭಾರತದ ಅಣುಶಕ್ತಿ ಕಾಯ್ದೆಯನ್ನು ಶಾಸಕಾಂಗ ಸಭೆಯಲ್ಲಿ ಮೊಟ್ಟಮೊದಲ ಬಾರಿಗೆ ಮಂಡಿಸಿದರು. ಇದರ ಅನ್ವಯ ಪ್ರಧಾನಿ ಅಧ್ಯಕ್ಷತೆಯಲ್ಲಿ ಅಣುಶಕ್ತಿ ಆಯೋಗ ರಚನೆಯಾಯಿತು.
ಋಣಾತ್ಮಕ ಅಂಶ
ನೆಹರೂ ಅವರ ಕುರಿತ ಕಡತದಲ್ಲಿ ಒಂದಷ್ಟು ಋಣಾತ್ಮಕ ಅಂಶಗಳಿರುವುದನ್ನೂ ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದದ್ದು ಹಾಗೂ ಚೀನಾ ಜತೆಗಿನ ಗಡಿ ವ್ಯಾಜ್ಯವನ್ನು ನಿರ್ವಹಿಸಿದ ಬಗೆ. ಬಹುಶಃ ನೆಹರೂ ಇಲ್ಲದಿದ್ದರೆ ಪರಿಣಾಮ ವಿಭಿನ್ನವಾಗಿರುತ್ತಿತ್ತು. ಇದು ಹೇಗೆ ಭಿನ್ನವಾಗಿರುತ್ತಿತ್ತು ಎಂದು ಗ್ರಹಿಸುವುದು ಸುಲಭಸಾಧ್ಯವಲ್ಲ. ಆದಾಗ್ಯೂ ಚೀನಾ ವಿಚಾರದಲ್ಲಿ ಅದು ಮಿಲಿಟರಿ ಆಯ್ಕೆ ಆಗಿರಲಿಲ್ಲ ಎನ್ನುವುದು ಸ್ಪಷ್ಟ. ದಾಖಲೆಗಳ ಪ್ರಕಾರ, ನೆಹರೂ ಅವರು ಜನರಲ್ ಕಾರ್ಯಪ್ಪಅವರಲ್ಲಿ, ಟಿಬೆಟ್ ವಿಚಾರದಲ್ಲಿ ಮಧ್ಯಪ್ರವೇಶಿಸಲು ಭಾರತಕ್ಕೆ ಸಾಮರ್ಥ್ಯ ಇದೆಯೇ ಎಂದು ಕೇಳಿದ್ದರು. ಇದಕ್ಕೆ ಕಾರ್ಯಪ್ಪಅವರು ಲಿಖಿತವಾಗಿ, ಭಾರತದ ಸೇನಾ ದೌರ್ಬಲ್ಯಗಳ ಹಿನ್ನೆಲೆಯಲ್ಲಿ ಮತ್ತು ಕಣಿವೆ ಪ್ರದೇಶದ ಹಿನ್ನೆಲೆಯಲ್ಲಿ ಇದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇನ್ನೊಂದು ಋಣಾತ್ಮಕ ಅಂಶವೆಂದರೆ, ಸೇನೆಯನ್ನು ನಿರ್ವಹಿಸಿದ ಬಗೆ. ನೆಹರೂ ಅವರ ಶಾಂತಿಪ್ರಿಯ ಧೋರಣೆ ಹಾಗೂ ಆದರ್ಶವಾದ ಅವರನ್ನು ದುರ್ಬಲ ಮಿಲಿಟರಿ ನಾಯಕರನ್ನಾಗಿ ಮಾಡಿತ್ತು. ಸರಕಾರದ ಪ್ರಮುಖ ಅಕಾರ ಸಾಧನವಾದ ಮಿಲಿಟರಿ ವ್ಯವಸ್ಥೆಗೆ ಸೂಕ್ತ ಗಮನ ಹರಿಸದೇ ಅದು ಶಿಥಿಲವಾಗಲು ಕಾರಣರಾದರು. ಅವರ ಅಂತಿಮ ಲೋಪವೆಂದರೆ, ಮಿಲಿಟರಿ ಬಗೆಗಿನ ಕೃಷ್ಣ ಮೆನನ್ ಅವರ ಅಪಕರ್ಷಕ ವ್ಯಕ್ತಿತ್ವದ ಪರಿಣಾಮವನ್ನು ನಿರ್ಲಕ್ಷಿಸಿದ್ದು.
ದೇಶದಲ್ಲಿ ನೆಹರೂ ಅವರ ಛಾಪನ್ನು ಅಳಿಸಲು ಅತ್ಯುನ್ನತ ಪ್ರಯತ್ನಗಳು ನಡೆಯಲು ಮುಖ್ಯ ಕಾರಣವೆಂದರೆ, ಅವರು ಆಧುನಿಕ ಭಾರತದ ಡಿಎನ್ಎ ಆಗಿರುವುದು ಎನ್ನುವ ಅಂಶ ಸುಸ್ಪಷ್ಟ. ನೆಹರೂ ಅವರನ್ನು ಈ ಸಮೀಕರಣದಿಂದ ಕಿತ್ತುಹಾಕುವುದು ಎಂದರೆ, ನೀವು ಭಾರತವನ್ನು ಕೀಳಂದಾಜು ಮಾಡಿದಂತೆ.
ಕೃಪೆ: thewire.in