ಸಿಂಗೂರ್ ತೀರ್ಪುಮತ್ತುಎಡರಂಗ ರಾಜಕೀಯದ ಭವಿಷ್ಯ
ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಎಡರಂಗ ಸರಕಾರದ ಅಕಾರಾವಯಲ್ಲಿ ಬಲಾತ್ಕಾರದಿಂದ ರೈತರ ಜಮೀನು ಸ್ವಾೀನಪಡಿಸಿಕೊಂಡಿರುವುದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ಖಾಸಗಿ ಕಂಪೆನಿಗೆ ಜಮೀನು ಸ್ವಾೀನಪಡಿಸಿಕೊಳ್ಳುವುದನ್ನು ಸಾರ್ವಜನಿಕ ಉದ್ದೇಶಕ್ಕೆ ಎಂದು ಪರಿಗಣಿಸಲಾಗದು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. 2006ರಲ್ಲಿ ಟಾಟಾ ಮೋಟರ್ಸ್ಗಾಗಿ ಈ ಜಮೀನು ಸ್ವಾೀನಪಡಿಸಿಕೊಳ್ಳಲಾಗಿದ್ದು, ಕಂಪೆನಿ ಇಲ್ಲಿ ತನ್ನ ಸಣ್ಣ ಕಾರುಗಳ ಅಂದರೆ ಟಾಟಾ ನ್ಯಾನೊ ಕಾರುಗಳ ಉತ್ಪಾದನಾ ಘಟಕ ನಿರ್ಮಿಸಲು ಉದ್ದೇಶಿಸಿತ್ತು.
2006ರಲ್ಲಿ ಈ ಬಲಾತ್ಕಾರದ ಭೂಸ್ವಾೀನ ರಾಜಕೀಯ ಚಳವಳಿಯಾಗಿ ರೂಪುಗೊಂಡಿತು. ರೈತರ ಈ ಚಳವಳಿಗೆ ಅಂದಿನ ವಿರೋಧ ಪಕ್ಷದ ನಾಯಕರಾದ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದರು. ಈ ಹೋರಾಟದ ಲವಾಗಿ, ಟಾಟಾ ತನ್ನ ಘಟಕವನ್ನು ಗುಜರಾತ್ಗೆ ಸ್ಥಳಾಂತರಿಸಿತು. ಗುಜರಾತ್ ಸರಕಾರ ಟಾಟಾ ಘಟಕಕ್ಕೆ ದೊಡ್ಡ ಪ್ರಮಾಣದ ಸಬ್ಸಿಡಿ ನೀಡಿದೆ ಎಂಬ ಕಾರಣಕ್ಕೆ ಅಲ್ಲೂ ಇದು ವಿವಾದಕ್ಕೆ ಕಾರಣವಾಯಿತು. ಮಮತಾ ಬ್ಯಾನರ್ಜಿ 2011ರ ಚುನಾವಣಾ ಪ್ರಚಾರದಲ್ಲಿ ಬಲಾತ್ಕಾರದ ಭೂಸ್ವಾೀನವನ್ನು ಪ್ರಮುಖ ಅಸವಾಗಿ ಬಳಸಿಕೊಂಡರು. ಪರಿಣಾಮವಾಗಿ ಎಡಪಕ್ಷಗಳ 34 ವರ್ಷಗಳ ಚಕ್ರಾಪತ್ಯ ಕೊನೆಗೊಂಡಿತು. 2016ರ ವಿಧಾನಸಭಾ ಚುನಾವಣೆಯಲ್ಲಿ ಕೂಡಾ ಸಿಪಿಎಂ, ತನ್ನ ಭೂಸ್ವಾೀನದ ತಪ್ಪನ್ನೇ ಸಮರ್ಥಿಸಿಕೊಂಡಿತು. ಪಕ್ಷ ತನ್ನ ಸಿಂಗೂರು ಪ್ರಚಾರವನ್ನು ಟಾಟಾ ನ್ಯಾನೊದಲ್ಲೇ ಆರಂಭಿಸಿತ್ತು. ಇದರ ಪರಿಣಾಮ ಹಿಂದಿನ ಚುನಾವಣೆಗಿಂತಲೂ ಭೀಕರ. ರಾಜ್ಯದಲ್ಲಿ ಸಿಪಿಎಂ ಕಾಂಗ್ರೆಸ್ ಪಕ್ಷಕ್ಕಿಂತಲೂ ಕೆಳಕ್ಕೆ ತಳ್ಳಲ್ಪಟ್ಟಿತು. ಇದೀಗ ಸಿಪಿಎಂ ಪಶ್ಚಿಮ ಬಂಗಾಳ ವಿಧಾನಸಭೆೆಯಲ್ಲಿ ಮೂರನೆ ಅತಿದೊಡ್ಡ ಪಕ್ಷವಾಗಿ ಉಳಿದಿದೆ.
ನಂಬಲಸಾಧ್ಯ ವಿಚಾರ ಎಂದರೆ, ಸಿಂಗೂರು ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದ ಬಳಿಕವೂ, ಸಿಪಿಎಂ ತನ್ನ ಭೂಸ್ವಾೀನ ನೀತಿ ಬಂಗಾಳಿಗಳಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರ್ಜ್ಯಕಾಂತ್ ಮಿಶ್ರಾ, ಸಿಂಗೂರು ಬಲಾತ್ಕಾರದ ಭೂಸ್ವಾೀನಕ್ಕೆ ಕ್ಷಮೆ ಯಾಚಿಸಲು ಬುಧವಾರ ನಿರಾಕರಿಸಿದರು.
ಕಡು ಬಡತನ
ಇಂಗ್ಲಿಷ್ಮಯವಾದ ಭಾರತದಲ್ಲಿ ಎಡ ಪಕ್ಷಗಳ ರಾಜಕೀಯ ಮುಗಿದೇ ಹೋಯಿತು ಎನ್ನುವುದು ಈಗ ಜನಪ್ರಿಯ ವಾದ. ವಾಸ್ತವವಾಗಿ ಇತಿಹಾಸಕ್ಕೆ ಎಂದೂ ಕೊನೆ ಇಲ್ಲ. ಉದಾಹರಣೆಗೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನೇ ತೆಗೆದುಕೊಳ್ಳಿ. ಸ್ವಯಂಘೋಷಿತ ಸಮಾಜವಾದಿ ಬೆರ್ನಿ ಸ್ಯಾಂಡರ್ಸ್ ಅಭ್ಯರ್ಥಿಯಾಗಲು ವಿಲರಾದರೂ, ನಿಕಟ ಸ್ಪರ್ಧೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ ಈಗ ಸುಭದ್ರವಾಗಿ ಬೇರೂರಿರುವ, ಅಕಾರರೂಢ ತೃಣಮೂಲ ಕಾಂಗ್ರೆಸ್ನ ನೀತಿಯನ್ನು ಎಡಪಂಥೀಯ ಜನಪ್ರಿಯ ಆರ್ಥಿಕ ನೀತಿ ಎಂದೇ ಕರೆಯಬಹುದು. ಇದು ಯೂರೋಪ್ನಲ್ಲೂ ಜನಪ್ರಿಯವಾಗುತ್ತಿರುವ ಪ್ರಕ್ರಿಯೆ.
ಹಾಗೆ ನೋಡಿದರೆ ಕೇವಲ ಮಮತಾ ಬ್ಯಾನರ್ಜಿ ಮಾತ್ರವಲ್ಲ; ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಮಾಜಿಕವಾಗಿ ಸಂಪ್ರದಾಯವಾಗಿ ಎನಿಸಿಕೊಂಡರೂ, ಅವರ ಆರ್ಥಿಕ ನೀತಿ ಭಾರತದ ಕೇಂದ್ರ ಮಾರ್ಗದ ನೀತಿಯಿಂತ ಭಿನ್ನವಲ್ಲ. ಮೋದಿ ಕಾರ್ಪೊರೆಟ್ ಕೈಭಿಕ್ಷೆಗೆ ವಿರುದ್ಧ ಎಂದು ಬಿಂಬಿಸಿಕೊಂಡು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಿದ್ದಾರೆ.
ಮೋದಿಯವರ ಬಹಳಷ್ಟು ಮಂದಿ ಇಂಗ್ಲಿಷ್ಪ್ರಿಯ ಬೆಂಬಲಿಗರು ಅವರನ್ನು ಮುಂದಿನ ಮಾರ್ಗರೆಟ್ ಥ್ಯಾಚರ್ ಆಗಿ ಬಿಂಬಿಸುವುದರಲ್ಲಿ ಹೆಮ್ಮೆ ಪಡುತ್ತಾರೆ. ಪ್ರತಿಯೊಂದನ್ನೂ ಖಾಸಗೀಕರಣಗೊಳಿಸುತ್ತಿರುವ ಮೋದಿಗೆ ವಾಸ್ತವವಾಗಿ ಇವರಿಗಿಂತ ಚೆನ್ನಾಗಿ ಭಾರತದ ಬಗ್ಗೆ ಅರಿವು ಇದೆ. ಇದು ಕೇವಲ ಪತ್ರಿಕೆಗಳನ್ನು ಓದುವುದರಿಂದ ತಿಳಿಯದು. ಖಂಡಿತವಾಗಿಯೂ ಭಾರತೀಯರು ಬಡಜನ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದ 188 ದೇಶಗಳ ಪೈಕಿ ಭಾರತಕ್ಕೆ 130ನೆ ಸ್ಥಾನ. ಭಾರತದಲ್ಲಿ ಕಳವಳಕಾರಿ ಪ್ರಮಾಣದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದ್ದು, ಹಸಿವನ್ನು ನಿರ್ವಹಿಸುವ ವಿಚಾರದಲ್ಲಿ ಭಾರತ ವಿಶ್ವದ 25 ನಿಕೃಷ್ಟ ದೇಶಗಳ ಪೈಕಿ ಒಂದು. ಬಾಂಗ್ಲಾದೇಶ, ಇರಾಕ್ ಹಾಗೂ ಯುದ್ಧಪೀಡಿತ ಇರಾಕ್ನಂಥ ದೇಶಗಳು ಕೂಡಾ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ. ಭಾರತದ ಇನ್ನೊಂದು ಭಯಾನಕ ಸಮಸ್ಯೆ ಎಂದರೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ್ದು. ದೇಶದಲ್ಲಿ ಹುಟ್ಟುವ ಪ್ರತಿ ಸಾವಿರ ಮಕ್ಕಳ ಪೈಕಿ 38 ಮಂದಿ ಮೊದಲ ಹುಟ್ಟುಹಬ್ಬವನ್ನು ಕಾಣುವುದೇ ಇಲ್ಲ. ಇಡೀ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನದಲ್ಲಿ ಮಾತ್ರ ಇದಕ್ಕಿಂತ ನಿಕೃಷ್ಟ ಪರಿಸ್ಥಿತಿ ಇದೆ.
ಎಡರಂಗದ ಸ್ಥಾನ ಖಾಲಿ
ಭಾರತ ಬಲಪಂಥೀಯ ಅರ್ಥನೀತಿಯನ್ನು ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟ. ಖಂಡಿತವಾಗಿಯೂ ಇದು ಒಳ್ಳೆಯ ರಾಜಕೀಯವಲ್ಲ. ನೈಜವಾಗಿ ಸಂಸತ್ತಿನಲ್ಲಿ ಎಡಪಕ್ಷಗಳ ಗಳಿಕೆ ಗರಿಷ್ಠವಾದದ್ದು, ಎಡರಂಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ 1960 ಹಾಗೂ 70ರ ದಶಕದಲ್ಲಲ್ಲ; ಬದಲಾಗಿ ದೇಶದಲ್ಲಿ ಸುಧಾರಣಾ ಪರ್ವ ಆರಂಆವಾದ 13 ವರ್ಷಗಳ ಬಳಿಕ; ಅಂದರೆ 2004ರ ಲೋಕಸಭಾ ಚುನಾವಣೆಯಲ್ಲಿ.
ಆದರೆ ವಿಚಿತ್ರವೆಂದರೆ, 2004ರ ಬಳಿಕ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಭೂಸ್ವಾೀನ ನೀತಿಯನ್ನು 2004ರಲ್ಲಿ ಆರಂಭಿಸಿದವು. ಆ ಬಳಿಕ ಕ್ರಮೇಣವಾಗಿ ಸಿಂಗೂರು ಹಾಗೂ ನಂದಿ ಗ್ರಾಮದಲ್ಲಿ ನಡೆದ ರೈತ ಹೋರಾಟಗಳು ಅದರ ಅವನತಿಗೆ ಕಾರಣವಾದವು.
ಸಿಪಿಎಂ ವಾಸ್ತವವಾಗಿ ಏಕೆ ಕಾಂಗ್ರೆಸ್ ಹಾಗೂ ಬಿಜೆಪಿಯ ಆರ್ಥಿಕ ನೀತಿಯನ್ನು ಎರವಲು ಪಡೆದುಕೊಂಡಿತು ಎನ್ನುವುದು ಇನ್ನೂ ನಿಗೂಢ. ಬೆಂಗಾಲಿಗರು ಕಾಂಗ್ರೆಸ್ ಅಥವಾ ಬಿಜೆಪಿ ಶೈಲಿಯ ಆರ್ಥಿಕ ನೀತಿಯನ್ನು ಇಷ್ಟಪಟ್ಟಿದ್ದರೆ, ಅವರು ಆ ಪಕ್ಷಗಳಿಗೇ ಬಹುಮತ ನೀಡುತ್ತಿದ್ದರು.
ಇನ್ನೊಂದು ಪಕ್ಷವನ್ನು ಅನುಕರಿಸುವ ಬದಲು ಸಿಪಿಐಎಂ ವಾಸ್ತವವಾಗಿ ತನ್ನ ಸ್ಪರ್ಧಾತ್ಮಕತೆಯ ಮೂಲಕ್ಕೆ ಅಂಟಿಕೊಳ್ಳುವುದೇ ಸೂಕ್ತ. ಎಡ ನೀತಿಗಳು ಹಾಗೂ ಕಳೆದುಕೊಂಡವರ ಬೇಡಿಕೆಗಳ ಪರವಾಗಿ ಧ್ವನಿ ಎತ್ತುವುದೇ ಸೂಕ್ತ ನೀತಿ. ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಹತಾಶೆ ದೇಶದಲ್ಲಿ ಕಂಡುಬರುತ್ತಿದ್ದು, ಈ ಅಂತರವನ್ನು ಭಾರತೀಯ ರಾಜಕಾರಣದಲ್ಲಿ ತುಂಬಿಸುವ ಅಗತ್ಯವಿದೆ.