ಭಾರತಕ್ಕೆ ಕಾರ್ಮಿಕನ ಮೃತದೇಹ ಹಿಂದಿರುಗಿಸಲು ಇಂಡಿಯನ್ ಸೋಶಿಯಲ್ ಫೋರಂ ಸಹಕಾರ
ಕಮೀಸ್ ಮುಷೈತ್, ಡಿ.23: ಕಮೀಸ್ ಮುಷೈತ್ ನಗರದಲ್ಲಿ ವೆಲ್ಡರ್ ಆಗಿ ದುಡಿಯುತ್ತಿದ್ದ ರಾಮನಾಥ್ ಬಿಂದ್ ಅವರು ನ.13ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರ ವಾರೀಸುದಾರರು ಯಾರೂ ಇಲ್ಲದ ಕಾರಣ ಮೃತದೇಹವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಇಂಡಿಯನ್ ಎಂಬಸಿ ಸೋಶಿಯಲ್ ಫೋರಂನ ಸದಸ್ಯರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿತು.
ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಹನೀಫ್ ಮಂಜೇಶ್ವರ, ನಝೀರ್ ಚಿಕ್ಕಮಗಳೂರು, ಸಾದಿಕ್ ಉಳ್ಳಾಲ, ಸಾಜಿದ್ ಕೆ.ಸಿ ರೋಡ್, ತನ್ವೀರ್ ಮೈಂದಾಳ ಮತ್ತು ಇಕ್ಬಾಲ್ ಕೆ.ಸಿ ರೋಡ್ ರವರ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರ ಭೇಟಿ ನೀಡಿ ದಾಖಲೆಗಳನ್ನು ಸರಿಪಡಿಸಿಕೊಡಲಾಯಿತು.
ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಷ್ಯತ್ ಘಟಕದ ಸಹಕಾರದಿಂದ ರಾಮನಾಥ್ ಬಿಂದ್ ರವರ ಮೃತದೇಹ ಅಂತಿಮವಾಗಿ ಡಿ.21ರಂದು ಅಭಾ ವಿಮಾನ ನಿಲ್ದಾಣದಿಂದ ಲಕ್ನೋ ವಿಮಾನ ನಿಲ್ದಾಣದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ರಾಮನಾಥ್ ಬಿಂದ್ ಅವರು ಸುಮಾರು 12 ವರ್ಷಗಳಿಂದ ಸೌದಿ ಅರೇಬಿಯಾದ ಕಮೀಸ್ ಮುಷೈತ್ ನಗರದಲ್ಲಿ ವೆಲ್ಡರ್ ಆಗಿ ದುಡಿಯುತ್ತಿದ್ದರು. ರಾಮನಾಥ್ ಬಿಂದ್ ರವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕಮೀಷ್ ಮುಷೈತ್ ಘಟಕ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಸಹೋದರ ಧರ್ಮೇಂದ್ರ ಫತೇಪುರ ಹಾಗೂ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.