ಅಲೆಮಾರಿ ಮಕ್ಕಳಿಗೆ ಶಿಕ್ಷಣ
ಯಾವಾಗಲೂ ದೊಡ್ಡವರು ಭೂಮಿ, ವಸತಿ ಅಥವಾ ಯಾವುದಕ್ಕಾದರೂ ಹೋರಾಟ ಮಾಡುವಾಗ ಅಥವಾ ಹೆಣಗಾಡುವಾಗ ನಿರ್ಲಕ್ಷಿತವಾಗುವುದು ಮಕ್ಕಳು. ಏಕೆಂದರೆ ದೊಡ್ಡವರು ವಸತಿ, ಭೂಮಿ, ಆಹಾರ, ಸಂಪಾದನೆ; ಹೀಗೆ ವ್ಯವಸ್ಥೆ ಮಾಡಿಕೊಂಡರೆ ಮಕ್ಕಳಿಗೆ ಸ್ವಾಭಾವಿಕವಾಗಿ ಎಲ್ಲವೂ ದೊರಕುತ್ತದೆ. ಮೊದಲು ಕುಟುಂಬಕ್ಕೆ ಅಥವಾ ಹಿರಿಯರಿಗೆ ವ್ಯವಸ್ಥೆ ಮಾಡಬೇಕು ಅಥವಾ ಮಾಡಿಕೊಳ್ಳಬೇಕು ಎಂಬ ಧೋರಣೆ ಅವರಲ್ಲಿಯೇ ಇದೆ. ಹಾಗಾಗಿ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ದೊಡ್ಡವರ ಪರಿಸ್ಥಿತಿಗಳು ಹೇಗೇ ಬಿಗಡಾಯಿಸಿದರೂ, ಅವರು ಕುಟುಂಬ ಅಥವಾ ಸಮೂಹದ ನೆಲೆಗಟ್ಟಿ ಮಾಡಿಕೊಳ್ಳಲು ಹೆಣಗುತ್ತಿದ್ದರೂ ಮಕ್ಕಳ ವಿಷಯವಾಗಿ ಪ್ರತ್ಯೇಕವಾದಂತಹ ಮತ್ತು ಪರ್ಯಾಯವಾದಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇಬೇಕು.
ದಿಡ್ಡಳ್ಳಿಯ ಮಕ್ಕಳು
ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ತೆರವು ಮಾಡಿಸಿದರ ವಿರುದ್ಧವಾಗಿ ನಡೆಯುವ ಹೋರಾಟದ ಸಮಯದಲ್ಲಿ ನನಗೆ ಬಹಳವಾಗಿ ಕಾಡುತ್ತಲಿದ್ದದ್ದು ಅಲ್ಲಿನ ಮಕ್ಕಳ ಸ್ಥಿತಿಗತಿಗಳೇನು ಎಂಬುದು. ಅಲ್ಲಿನ ಆದಿವಾಸಿಗಳಲ್ಲಿ ಕೆಲವು ವಿದ್ಯಾವಂರು ಕೂಡ ಇದ್ದರು. ಅಂದರೆ ಶಿಕ್ಷಣ ಪಡೆಯುವಂತಹ ವ್ಯವಧಾನ ಅವರಿಗಿದ್ದರೆ ವ್ಯವಸ್ಥೆಯನ್ನು ತಾವು ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ ಎಂದು ಒ್ಮುುಖದ ಆಲೋಚನೆ ಮಾಡಬಹುದು.
ಅಲ್ಲಿನ ಮಕ್ಕಳನ್ನು ಮತ್ತು ಹೆಂಗಸರನ್ನು ಮಾತಾಡಿಸಿದಾಗ ಸದ್ಯಕ್ಕೆ ಇರುವ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಹಾಗೂ ಅವರದು ಅಲೆಮಾರಿ ಬದುಕು ಆಗಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆ ಇದೆ ಎಂದೂ ಹೇಳಿದರು. ಆದರೆ ಕಾಲಕಾಲಕ್ಕೆ ಕೊಡಬೇಕಾದ ಚುಚ್ಚುಮದ್ದು, ಲಸಿಕೆ ಮತ್ತು ಪೋಲಿಯೊ ಡ್ರಾಪ್ಸ್ ನಂತಹ ಸೌಲಭ್ಯವನ್ನು ಎಲ್ಲಾ ಮಕ್ಕಳಿಗೂ ದೊರಕಿಸಿಕೊಡಲಾಗಿತ್ತು. ನಾನು ವಿಚಾರಿಸಿದ ಹಾಗೆ ಅಲ್ಲಿದ್ದ ಎಲ್ಲಾ ಮಕ್ಕಳಿಗೂ ಲಸಿಕೆಗಳನ್ನು ಕೊಡಲಾಗಿತ್ತು. ಆದರೆ ಶಿಕ್ಷಣದ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಹಾಗೂ ಎಷ್ಟೋ ಮಕ್ಕಳಿಗೆ ಜನನ ಪ್ರಮಾಣ ಪತ್ರವನ್ನು ಕೂಡ ಹೊಂದಿರಲಿಲ್ಲ.
ಎದುರಿಗೇ ಇರುವ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಈ ಹೋರಾಟದ ಕಾರಣದಿಂದ ತಮ್ಮ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ ಎಂದೂ ದೂರಿದರು. ಸುತ್ತಮುತ್ತಲಿನ ಹಾಡಿಯಲ್ಲಿನ ಮಕ್ಕಳು ಶಾಲೆಗೆ ಬರುತ್ತಲಿದ್ದು ಅವರಲ್ಲಿ ಅನೇಕ ಮಕ್ಕಳು ಅಲೆಮಾರಿ ಹಿನ್ನೆಲೆಯನ್ನು ಹೊಂದಿದ್ದರು ಕೂಡಾ, ಈ ಸುತ್ತುವಿಕೆಯನ್ನು ನಿಲ್ಲಿಸಿ ಒಂದೆಡೆ ನೆಲೆಯೂರಿದ್ದಾರೆ. ಹಾಗಾಗಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ದಿಡ್ಡಳ್ಳಿಯ ಆದಿವಾಸಿ ಮಕ್ಕಳಲ್ಲಿ ಹಲವರು ಈ ಶಿಕ್ಷಣದಿಂದ ವಂಚಿತರಾಗಿದ್ದರು. ಮಕ್ಕಳ ತಾಯಂದಿರನ್ನು ಈ ಕುರಿತು ಮಾತಾಡಿಸಿದಾಗ, ನಮಗೂ ಈಗ ಅಲೆಮಾರಿ ಬದುಕು ಬೇಡ. ಒಂದೆಡೆ ನೆಲೆ ನಿಂತರೆ ಮಕ್ಕಳಿಗೆ ಸರಿಯಾಗಿ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅದು ನಿಜವೂ ಕೂಡ. ಒಂದು ವ್ಯವಸ್ಥಿತವಾದ ಶಿಕ್ಷಣವನ್ನು ಪಡೆಯಲು ಒಂದೆಡೆ ನೆಲೆ ನಿಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮಕ್ಕಳ ಶಿಕ್ಷಣಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಓಘಕ್ಕೆ ತೊಂದರೆ ಆಗಬಾರದು. ನಿಯಮಿತವಾಗಿರುವಂತಹ ವಾರ್ಷಿಕ ಕಾಲಾವ ಶಿಕ್ಷಣಕ್ಕಿದೆ. ಹಂತದಿಂದ ಹಂತಕ್ಕೆ ಮಕ್ಕಳು ಶಿಕ್ಷಣದಲ್ಲಿ ಮುಂದುವರಿಯಲು ಅವರಿಗೆ ಅಲೆಮಾರಿತನದಿಂದ ತೊಂದರೆಯಾಗುತ್ತದೆ. ಕನಿಷ್ಠ ಪಕ್ಷ ಒಂದು ವರ್ಷ ಕಳೆದ ಮೇಲೆ ಮತ್ತೊಂದು ಶಾಲೆಯಲ್ಲಿ ಮರು ಸೇರ್ಪಡೆಯಾಗುವಂತಹ ಅವಕಾಶವಿರಬೇಕು. ಅಲೆಮಾರಿ ಬದುಕಿನಲ್ಲಿ ಸಂಪಾದನೆ ಮತ್ತು ಹೊಟ್ಟೆ ಬಟ್ಟೆಗಳ ವಿಷಯದಲ್ಲಿಯೂ ವ್ಯತ್ಯಾಸಗಳಾಗುವುದರಿಂದ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀಳುತ್ತದೆ. ಆಗ ಶಾಲೆಗೆ ಕಳುಹಿಸುವ ಬದಲು ಮಕ್ಕಳನ್ನು ಕೆಲಸಕ್ಕೆ ಹಚ್ಚುವ ಅನಿವಾರ್ಯತೆ ಪೋಷಕರಿಗೆ ಬರಬಹುದು. ಹೀಗೆ ಹತ್ತು ಹಲವು ಸಮಸ್ಯೆಗಳು ಮಕ್ಕಳು ಎದುರಿಬೇಕಾಗುತ್ತದೆ.
ಬೊಮ್ಮನಕಟ್ಟೆಯ ಕ್ಯಾಂಪಿನಲ್ಲಿ..
ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಒಂದು ಅಲೆಮಾರಿ ಜನರ ಕ್ಯಾಂಪಿಗೆ ಭೇಟಿಕೊಟ್ಟಿದ್ದೆ. ಅಲ್ಲಿಯೂ ಕೂಡ ಇದೇ ಸಮಸ್ಯೆಯನ್ನು ಅವರು ಮುಂದಿಟ್ಟಿದ್ದರು. ಆ ಕ್ಯಾಂಪಿನಲ್ಲಿ ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ, ದುರ್ಗಿಮುರ್ಗಿ, ಹೆಳವರು, ಹಂಡಿಜೋಗಿ, ದರ್ವೇಶ್; ಹೀಗೆ ಹಲವು ಪಂಗಡಗಳಿದ್ದವು. ಬೇರೆ ಯಾವುದೋ ಸ್ಥಳದಿಂದ ಬಂದವರು ಅಲ್ಲಿಂದ ಮತ್ತೆ ಬೇರೆಲ್ಲೋ ಹೋಗಲಿಕ್ಕೆ ಇಚ್ಛೆ ಇಲ್ಲದೆ ತಮಗೆ ಸರಕಾರ ಜಾಗ ಕೊಡುವುದು ಎಂದು ಕಾಯುತ್ತಾ ಇದ್ದರು. ಅಲ್ಲಿಯೂ ಕೂಡ ಇದೇ ಸಮಸ್ಯೆ. ಮಕ್ಕಳನ್ನು ಅವರು ಗಮನಿಸಿಕೊಂಡೇ ಇರಲಿಲ್ಲ. ಅವರ ಶಿಕ್ಷಣದ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿರಲಿಲ್ಲ. ಶಾಲೆಗೆ ಹೋಗುವ ಎಲ್ಲಾ ಮಕ್ಕಳೂ ಬಿಸಿಲಿನಲ್ಲಿ ಆಡಿಕೊಂಡಿದ್ದರು. ಕೆಲವರು ದೊಡ್ಡವರಿಗೆ ಸಹಾಯ ಮಾಡುತ್ತಿದ್ದರು. ಲಸಿಕೆಗಳನ್ನು ಮಾತ್ರ ಯಾವುದೇ ಸರಕಾರಿ ಆಸ್ಪತ್ರೆಗಳಲ್ಲಿ ಕೊಡಿಸಿರುತ್ತಿದ್ದರು. ಆದರೆ ಶಾಲೆಗೆ ಹೋಗುವ ವಿಷಯದಲ್ಲಿ ಅವರಿಗೆ ಗೊಂದಲವಿತ್ತು. ಯಾಕೆ ಶಾಲೆಗೆ ಕಳಿಸಿಲ್ಲ ಅಂದರೆ, ಈಗ ಇರುವ ಜಾಗದಿಂದ ನಮ್ಮನ್ನು ಕಳುಹಿಸಿಬಿಟ್ಟರೆ ಮಕ್ಕಳಿಗೆ ಶಾಲೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಹಾಗಾಗಿ ಒಂದು ಶಾಶ್ವತ ನೆಲೆಯನ್ನು ಕಂಡು ಕೊಳ್ಳುವವರೆಗೂ ಅವರನ್ನು ಸೇರಿಸುವುದಿಲ್ಲ ಎಂದರು. ಆದರೆ ಆ ರೀತಿಯ ಶಾಶ್ವತ ನೆಲೆಯನ್ನು ಕಂಡುಕೊಳ್ಳದೆಯೇ ಎಷ್ಟೋ ಮಕ್ಕಳು ಹರೆಯಕ್ಕೆ ಬಂದಿದ್ದರು. ಒಟ್ಟಿಗೆ ಪರೀಕ್ಷೆ ಕಟ್ಟಿಬಿಡುತ್ತೇವೆ ಎಂದರು. ಆದರೆ ಹದಿನೇಳರ ವಯಸ್ಸಿನ ಹುಡುಗನಿಗೊಬ್ಬನಿಗೆ ಎರಡನೆ ತರಗತಿು ಪಾಠವನ್ನೂ ಓದಲು ಬರುತ್ತಿರಲಿಲ್ಲ.
ಸಿಕ್ಕರೆ ಶಿಕಾರಿ ಇಲ್ಲವೇ ಭಿಕಾರಿ
ಓರ್ವ ಹಕ್ಕಿಪಿಕ್ಕಿಯ ಹುಡುಗನ ಸಂದರ್ಶಿಸಿದೆ. ಅವನು ಶಾಲೆಗೆ ಹೋಗಿದ್ದರೆ ಏಳನೆಯ ತರಗತಿ ಇರಬೇಕಿತ್ತು. ಆದರೆ ಅವನು ಶಾಲೆಯ ಮುಖವನ್ನೇ ನೋಡಿರಲಿಲ್ಲ. ಯಾಕೆ ಶಾಲೆಗೆ ಹೋಗಲ್ಲ ಅಂದರೆ ನಮಗೆ ನಮ್ಮ ಭಾಷೆಯಲ್ಲಿ ಪಾಠ ಹೇಳಲ್ಲ ಎಂದು ಹೇಳಿದ. ಅವರದ್ದು ವಾಗ್ರಿ ಭಾಷೆಯಂತೆ. ಮರಾಠಿ, ಗುಜರಾತಿ, ಹಿಂದಿ ಮತ್ತು ಕನ್ನಡದ ಮಿಶ್ರಣದಂತಿರುವ ಆ ಭಾಷೆಯ ಕಲಿಕೆಯ ಮಾಧ್ಯಮ ಇರುವುದಿಲ್ಲ. ಕನ್ನಡದ ಮಾಧ್ಯಮದಲ್ಲಿ ಕಲಿ ಎಂದು ಅವನ ಮನವೊಲಿಸುವುದರಲ್ಲಿ ಸಾಕುಸಾಕಾಯ್ತು. ಈಗಲೂ ಅವನ ಒಲವು ಇರುವುದು ಬೇಟೆಯಾಡುವುದರಲ್ಲಿಯೇ. ಚಿಟ್ಕೋಳಿ, ಗೌಜಲಕ್ಕಿ, ಮುಂಗುಸಿ, ಮೊಲ, ಕಾಡುಕೋಳಿ ಇತ್ಯಾದಿಗಳನ್ನು ಬೇಟೆಯಾಡಿಕೊಂಡು ಬಂದು ಅದನ್ನು ಮಾರಿದರೆ ಸಾಕು ಸಂಪಾದನೆ ಆಗುತ್ತದೆ, ಓದಿ ಏನು ಮಾಡಬೇಕು ಎಂದು ಅವನ ಪ್ರಶ್ನೆ. ಓದುವುದು ಕೆಲಸಕ್ಕೆ ಸೇರಲೆಂದೇ ಅವನ ಗ್ರಹಿಕೆ. ವಿಷಯವೇನೆಂದರೆ ಅವನಿಗೆ ಓದಿನ ಮಹತ್ವವನ್ನು ತಿಳಿಸುವಂತಹ ಹಿರಿಯರೂ ಅವನ ಸುತ್ತಮುತ್ತಲಿಲ್ಲ. ಅವನ ಮನೆಯಲ್ಲಂತೂ ಇಲ್ಲವೇ ಇಲ್ಲ. ಈಗ ಕಾಡು ಇಲ್ಲದೇ ಹೋಗುತ್ತಿರುವುದರಿಂದ ಮತ್ತು ಅರಣ್ಯದಲ್ಲಿಯೂ ಬೇಕಾದಂತೆ ಬೇಟೆಯಾಡಲು ಅವಕಾಶವಿಲ್ಲ ಎಂದ. ಸಿಕ್ಕರೆ ಶಿಕಾರಿ ಇಲ್ಲಾಂದ್ರೆ ಭಿಕಾರಿಯ ಪರಿಸ್ಥಿತಿ ಇರುವುದರಿಂದ ಕೆಲವೊಮ್ಮೆ ಶಾಲೆಗೆ ಹೋಗೋಣ ಅನ್ನಿಸತ್ತೆ. ಆದರೆ ಇನ್ನೂ ನಾಲ್ಕೆದು ವರ್ಷ ನೋಡ್ತೀನಿ. ಆಮೇಲೆ ತನ್ನ ಕಸುಬು ತನ್ನ ಕೈ ಹಿಡಿಯಲಿಲ್ಲಾಂದ್ರೆ ಓದೋದೋ, ಬೇರೆ ಕೆಲಸಕ್ಕೆ ಹೋಗುವುದೋ ಮಾಡುತ್ತೀನಿ ಅಂದ. ಆ ಹೊತ್ತಿಗಾಗಲೇ ಓದುವ ವಯಸ್ಸು ಮುಗಿದುಹೋಗುತ್ತದೆ ಎಂಬ ಅರಿವೂ ಆ ಹುಡುಗನಿಗಿರಲಿಲ್ಲ.
ಇನ್ನು ಹೆಣ್ಣು ಮಕ್ಕಳಿಗಂತೂ ಏಕೆ ಓದು ಎಂದೇ ಕೇಳಿದರು. ಹದಿನಾಲ್ಕು ಅಥವಾ ಹದಿನೈದರ ವಯಸ್ಸಿಗೆ ಮದುವೆ ಮಾಡಿಬಿಡುತ್ತೇವೆ. ಅವರಿಗೇಕೆ ಓದು ಬರಹ ಎಲ್ಲಾ ಎಂಬ ಧೋರಣೆ. ಕಾಡಲ್ಲಿ ಹುಟ್ಟಿರುವ ಅನೇಕ ಮಕ್ಕಳಿಗೆ ಜನನ ಪ್ರಮಾಣ ಪತ್ರವಾಗಲಿ, ಸರಿಯಾದಂತಹ ಹುಟ್ಟಿದ ದಿನಾಂಕವನ್ನಾಗಲಿ ಹೊಂದಿಲ್ಲ. ಪರಾವಲಂಬನದ ಲ
ದಿಡ್ಡಳ್ಳಿಯೂ ಸೇರಿದಂತೆ ಹಲವು ಕಡೆ ಅಲೆಮಾರಿ ಕುಟುಂಬಗಳ ಕ್ಯಾಂಪ್ಗಳ ಜೊತೆ ಸಂದರ್ಶನಕ್ಕೆ ಹೋದಾಗ ಮಕ್ಕಳ ವಿಷಯದಲ್ಲಿ ಕೆಲವು ವಿಷಯಗಳನ್ನು ಗಮನಿಸಿದೆ.
1.ಮಕ್ಕಳ ಉಡುಗೆ ತೊಡುಗೆಗಳು ಕೊಳಕಾಗಿರುತ್ತವೆ.
2.ಮೂಗಿನಿಂದ ಸೋರುತ್ತಿರುವ ಸಿಂಬಳ. ಕೈಗಳಲ್ಲಿ ಮೆತ್ತಿರುವಂತಹ ಗಲೀಜು ಇತ್ಯಾದಿಗಳನ್ನು ಹಾಗೆಯೇ ಉಳಿಸಿಕೊಂಡಿರುವುದು.
3.ತಲೆಗೂದಲನ್ನು ಸರಿಯಾಗಿ ಬಾಚಿಕೊಳ್ಳದೆ ಹಾಗೆಯೇ ಇರಿಸಿಕೊಂಡಿರುವುದರಿಂದ ಎಣ್ಣೆಗಾಣದೇ ಮಾಸಲಾಗಿರುವುದು ಅಥವಾ ಗಂಟುಕಟ್ಟಿರುವುದು.
4.ಆಹಾರದ ಪೊಟ್ಟಣ ಅಥವಾ ಬಟ್ಟೆ, ಹೊದಿಕೆಯಂತಹ ವಸ್ತುಗಳನ್ನು ವಿತರಿಸುವಂತಹ ಸಮಯದಲ್ಲಿ ನುಗ್ಗುವುದು ಮತ್ತು ಒಮ್ಮೆ ತೆಗೆದುಕೊಂಡಿದ್ದರೂ ಮತ್ತೊಮ್ಮೆ ಸಾಲಿನಲ್ಲಿ ನುಗ್ಗಿ ಪಡೆದಿಲ್ಲ ಎಂದು ಹೇಳಿ ವಸ್ತುಗಳನ್ನು ಪಡೆಯುವುದು.
5.ಒಬ್ಬರ ಮೇಲೆ ಒಬ್ಬರು ಹೇಳುವುದು ಅಥವಾ ಬೇರೊಬ್ಬರಾರೋ ವಸ್ತುವನ್ನು ಎರಡು ಸಲ ಪಡೆದಿದ್ದಾರೆ ಎಂದು ಜಗಳವಾಡುವುದು.
6.ಏನಾದರೂ ಲಾಭವಾಗುವಂತಿದ್ದರೆ ಅಥವಾ ವಸ್ತುಗಳು ದೊರಕುವಂತಿದ್ದರೆ ಮಾತ್ರ ವ್ಯಕ್ತಿಗಳನ್ನು ಮಾತಾಡಿಸುವುದು ಅಥವಾ ಮಾತಾಡಿಸಿದರೆ ಜವಾಬು ಹೇಳುವುದು. ಶಿಕ್ಷಣ ಅಥವಾ ಶುದ್ಧತೆ ಇತ್ಯಾದಿಗಳ ಬಗ್ಗೆ ತಿಳುವಳಿಕೆ ಹೇಳಲು ಬರುವವರನ್ನು ತಿರಸ್ಕರಿಸುವುದು.
7.ಸದಾ ಪರಾವಲಂಬಿಯಾಗಿಯೇ ಇರುವವರಂತೆ ಕಾಣುವುದು ಮತ್ತು ಮಾತಾಡುವುದು.
8.ವಿದ್ಯಾವಂತರಲ್ಲದ ಮತ್ತು ಬೇರೆ ಕೆಲಸಗಳು ಮಾಡಿ ಅನುಭವವಿಲ್ಲದ ಗಂಡಸರು ಅಥವಾ ಹೆಂಗಸರು ತಮಗೆ ದೊರಕುವ ಕೆಲಸವನ್ನಷ್ಟೇ ಮಾಡಿ ಅದರಿಂದ ಬಂದ ಣವನ್ನು ಕುಡಿತಕ್ಕೆ ಹಾಕುವುದು.
ಸರಕಾರದಿಂದ ಹಕ್ಕುದಾಯಿತ್ವದಲ್ಲಿ ಸೌಲಭ್ಯಗಳನ್ನು ಮತ್ತು ಸವಲತ್ತುಗಳನ್ನು ಪಡೆಯುವುದಾದರೂ ಅವರಿಗೆ ಮೂಲಭೂತವಾಗಿ ಮತ್ತು ವ್ಯಕ್ತಿಗತವಾಗಿ ಕೆಲವು ರೂಢಿಗಳನ್ನು ಮಾಡಿಸಲು ಮತ್ತು ವಿಷಯಗಳನ್ನು ತಿಳುವಳಿಕೆಗೆ ತರಲು ಹಲು ಎನ್ಜಿಒಗಳು ಕೆಲಸ ಮಾಡುತ್ತಿವೆ.
ಉದಾಹರಣೆಗೆ ಶೌಚ ಮತ್ತು ಆಹಾರದ ವಿಷಯಗಳಲ್ಲಿ ವ್ಯಕ್ತಿಗತ ಶುದ್ಧತೆಯನ್ನು ಕಾಪಾಡಿಕೊಳ್ಳುವುದು. ಬಟ್ಟೆ ಮತ್ತು ಪರಿಸರಗಳನ್ನು ಶುದ್ಧವಾಗಿಟ್ಟುಕೊಳ್ಳುವುದು. ಯಾರೇ ಬಂದರೂ ಮಾತನಾಡಿಸಿ ಸಂಪರ್ಕ ಸಾಸುವುದು ಮತ್ತು ಅವರಿಂದ ತಮ್ಮ ಅನುಭವಕ್ಕೆ ಅಥವಾ ಕೆರಿಯರ್ಗೆ ಯಾವ ತರಹದ ಅನುಕೂಲಗಳನ್ನು ಪಡೆದುಕೊಳ್ಳಬಹುದು ಎಂಬ ಸೂಕ್ಷ್ಮತೆಯನ್ನು ತಿಳಿದುಕೊಳ್ಳುವುದು. ಕುಡಿತವೇ ಮೊದಲಾದ ವ್ಯಸನಗಳಿಂದ ದೂರವಿರಿಸುವುದು. ಶಾಲೆಗೆ ಹೋಗುವುದು ಅಥವಾ ಟೆಂಟ್ ಶಾಲೆಗಳಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಓದು ಬರಹ ಕಲಿಸುವುದು. ಲೆಕ್ಕ ಕಲಿಸುವುದು. ಕರಕುಶಲತೆಯನ್ನು ಬೆಳೆಸುವುದು. ಮಕ್ಕಳಿಗೆ ನೃತ್ಯ, ಸಂಗೀತ, ಚಿತ್ರಕಲೆ, ನಾಟಕ ಇತರ ಚಟುವಟಿಕೆಗಳನ್ನು ಹೇಳಿಕೊಡುತ್ತಾ ಅವರ ಅರಿವಿನ ಮತ್ತು ಅನುಭವದ ವಿಸ್ತಾರವನ್ನು ಹಿರಿದಾಗಿಸುವುದು. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಅಲ್ಲದ ಶಿಕ್ಷಣದ ಮೂಲಕ ಭಾಷೆ, ಲೆಕ್ಕ, ಬ್ಯಾಂಕಿನಲ್ಲಿ ವ್ಯವಹಾರ, ಪೋಸ್ಟ್ ಆಫೀಸಿನಲ್ಲಿ ವ್ಯವಹಾರ, ಕಂಪ್ಯೂಟರ್, ಮೊಬೈಲ್ ರಿಪೇರಿ, ಮಿಕ್ಸಿ ರಿಪೇರಿ, ವಾಹನಗಳ ರಿಪೇರಿ ಇತ್ಯಾದಿಗಳನ್ನು ಕಲಿಸುವಂತಹ ಕಾರ್ಯಾಗಾರಗಳನ್ನು ಏರ್ಪಡಿಸುವುದು; ಹೀಗೆ ಹಲವು ರೀತಿಯ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅದಕ್ಕೆ ಸರಕಾರದಿಂದಲೂ ಮತ್ತು ವಿವಿಧ ಖಾಸಗಿ ಯೋಜನೆಗಳಿಂದಲೂ ಸಹಾಯವೂ, ಅನುದಾನವೂ ದೊರಕುತ್ತದೆ.
ಸ್ವಾವಲಂಬನದ ಬದುಕಿಗೆ ದಾರಿ
ಯಾವಾಗಲೂ ದೊಡ್ಡವರು ಭೂಮಿ, ವಸತಿ ಅಥವಾ ಯಾವುದಕ್ಕಾದರೂ ಹೋರಾಟ ಮಾಡುವಾಗ ಅಥವಾ ಹೆಣಗಾಡುವಾಗ ನಿರ್ಲಕ್ಷಿತವಾಗುವುದು ಮಕ್ಕಳು. ಏಕೆಂದರೆ ದೊಡ್ಡವರು ವಸತಿ, ಭೂಮಿ, ಆಹಾರ, ಸಂಪಾದನೆ; ಹೀಗೆ ವ್ಯವಸ್ಥೆ ಮಾಡಿಕೊಂಡರೆ ಮಕ್ಕಳಿಗೆ ಸ್ವಾಭಾವಿಕವಾಗಿ ಎಲ್ಲವೂ ದೊರಕುತ್ತದೆ. ಮೊದಲು ಕುಟುಂಬಕ್ಕೆ ಅಥವಾ ಹಿರಿಯರಿಗೆ ವ್ಯವಸ್ಥೆ ಮಾಡಬೇಕು ಅಥವಾ ಮಾಡಿಕೊಳ್ಳಬೇಕು ಎಂಬ ಧೋರಣೆ ಅವರಲ್ಲಿಯೇ ಇದೆ. ಹಾಗಾಗಿ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ದೊಡ್ಡವರ ಪರಿಸ್ಥಿತಿಗಳು ಹೇಗೇ ಬಿಗಡಾಯಿಸಿದರೂ, ಅವರು ಕುಟುಂಬ ಅಥವಾ ಸಮೂಹದ ನೆಲೆಗಟ್ಟಿ ಮಾಡಿಕೊಳ್ಳಲು ಹೆಣಗುತ್ತಿದ್ದರೂ ಮಕ್ಕಳ ವಿಷಯವಾಗಿ ಪ್ರತ್ಯೇಕವಾದಂತಹ ಮತ್ತು ಪರ್ಯಾಯವಾದಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇಬೇಕು.
ಕ್ಯಾಂಪಿಗೆ ಬರುವ ದಾನಿಗಳ ಮುಂದೆಲ್ಲಾ ಕೈ ಚಾಚಿಕೊಂಡು ಅಥವಾ ತಮ್ಮ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ಹೇಳಿಕೊಂಡು ಏನಾದರೂ ಸಹಾಯ ಮಾಡಿ ಎಂದು ಗೋಗರೆಯುತ್ತಾ, ಅಂದಿಗೆ ಸಿಕ್ಕಿದ್ದನ್ನು ಪಡೆದು, ಸುಖಿಸಿ, ಮತ್ತೆ ಯಾರಿಂದ ಸಹಾಯ ದೊರಕಬಹುದು ಎಂದು ನಿರೀಕ್ಷಿಸುತ್ತಿರುವಂತಹ ಹಿರಿಯರು ಮಕ್ಕಳಿಗೆ ಒಳ್ಳೆಯ ಮಾದರಿಗಳಾಗುವುದಿಲ್ಲ. ಮಕ್ಕಳಿಗೆ ಸ್ವಾಭಿಮಾನವನ್ನು ಮೂಡಿಸುವ ನಿಟ್ಟಿನಲ್ಲಿ ದೊಡ್ಡವರೂ ಮತ್ತು ಅವರಿಗೆ ನೆರವಾಗುವಂತಹ ಸಂಘ ಸಂಸ್ಥೆಗಳು ಯೋಜನೆಗಳನ್ನು ರೂಪಿಸಬೇಕು. ಮಕ್ಕಳಿಗೆ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ, ತಮ್ಮ ಸಮುದಾಯದ ಹಿನ್ನೆಲೆ ಮತ್ತು ಮುಂದಿನ ನಡೆಗಳ ಬಗ್ಗೆ ಸ್ಪಷ್ಟತೆ, ಸಾಂಪ್ರದಾಯಕವೇ ಆಗಲಿ ಅಥವಾ ಮುಕ್ತಾವಕಾಶಗಳ ಮೂಲಕವೇ ಆಗಲಿ ಪಡೆಯುವ ಶಿಕ್ಷಣ ಮತ್ತು ತರಬೇತಿಗಳ ಬಗ್ಗೆ ಒಲವು ಮೂಡಿಸಬೇಕು. ಹೀಗಾದಾಗ ಮಾತ್ರ ಯಾವುದೇ ಸಮುದಾಯದ ಮಕ್ಕಳಾದರೂ ಸಮುದಾಯ ಪ್ರಜ್ಞೆ ಮತ್ತು ಅದರ ಸ್ಥಿತಿಗತಿಗಳೊಡನೆಯೇ ಸ್ವಾವಲಂಬನದ ಬದುಕನ್ನು ಕಟ್ಟಿಕೊಳ್ಳುವ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿರುವ ಯೋಜನೆಗಳು ಮತ್ತು ಕಾರ್ಯಾಗಾರಗಳ ಸ್ಥಿತಿಗತಿಗಳನ್ನು ಮುಂದೆ ನೋಡೋಣ.
ಯಾವಾಗಲೂ ದೊಡ್ಡವರು ಭೂಮಿ, ವಸತಿ ಅಥವಾ ಯಾವುದಕ್ಕಾದರೂ ಹೋರಾಟ ಮಾಡುವಾಗ ಅಥವಾ ಹೆಣಗಾಡುವಾಗ ನಿರ್ಲಕ್ಷಿತವಾಗುವುದು ಮಕ್ಕಳು. ಏಕೆಂದರೆ ದೊಡ್ಡವರು ವಸತಿ, ಭೂಮಿ, ಆಹಾರ, ಸಂಪಾದನೆ; ಹೀಗೆ ವ್ಯವಸ್ಥೆ ಮಾಡಿಕೊಂಡರೆ ಮಕ್ಕಳಿಗೆ ಸ್ವಾಭಾವಿಕವಾಗಿ ಎಲ್ಲವೂ ದೊರಕುತ್ತದೆ. ಮೊದಲು ಕುಟುಂಬಕ್ಕೆ ಅಥವಾ ಹಿರಿಯರಿಗೆ ವ್ಯವಸ್ಥೆ ಮಾಡಬೇಕು ಅಥವಾ ಮಾಡಿಕೊಳ್ಳಬೇಕು ಎಂಬ ಧೋರಣೆ ಅವರಲ್ಲಿಯೇ ಇದೆ. ಹಾಗಾಗಿ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ದೊಡ್ಡವರ ಪರಿಸ್ಥಿತಿಗಳು ಹೇಗೇ ಬಿಗಡಾಯಿಸಿದರೂ, ಅವರು ಕುಟುಂಬ ಅಥವಾ ಸಮೂಹದ ನೆಲೆಗಟ್ಟಿ ಮಾಡಿಕೊಳ್ಳಲು ಹೆಣಗುತ್ತಿದ್ದರೂ ಮಕ್ಕಳ ವಿಷಯವಾಗಿ ಪ್ರತ್ಯೇಕವಾದಂತಹ ಮತ್ತು ಪರ್ಯಾಯವಾದಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇಬೇಕು.