ಈ ಮುಗ್ದ ಮಗುವಿಗೆ ಸಹಾಯ ಮಾಡೋಣವೇ..?
ಮೂಡುಬಿದಿರೆ, ಎ.7: ಇದು ಅತ್ತ ಆರಕ್ಕೆ ಎರದ ಇತ್ತ ಮೂರಕ್ಕೆ ಇಳಿಯದ ಸಾಮಾನ್ಯ ಬಡವರ್ಗದ ಕುಟುಂಬವೊಂದರ ಕರುಣಾಜನಕ ಕಥೆ. ಅವರು ಪಡುಕೊಣಾಜೆ ಗ್ರಾಮದ ಓಂ ಶ್ರೀ ಲಕ್ಷ್ಮೀ ಶ್ರೀನಿವಾಸದ ರಾಜೇಶ್ ಮತ್ತು ಅಮಿತ ದಂಪತಿ.
ರಾಜೇಶ್ ಮೂಡಬಿದಿರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅಮಿತ ಗೃಹಿಣಿಯಾಗಿ ಸಂಸಾರದ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲರಂತೆ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸುಂದರ ಸಂಸಾರವಾಗಿತ್ತದು. ತಮ್ಮ ವಂಶೋದ್ಧಾರಕನ ನಿರೀಕ್ಷೆಯಲ್ಲಿದ್ದ ಅವರಿಗೆ ಭಗವಂತ ಗಂಡು ಮಗುವನ್ನೇ ಕರುಣಿಸಿದ್ದ. ಆ ಮಗುವಿನ ಹೆಸರು ಸುಪ್ರಿತ್.
ಮಗು ಜನಿಸುತ್ತಲೇ ವಿಚಿತ್ರ ಹೆಸರಿನ ಖಾಯಿಲೆಯಿಂದ ನರಳುತ್ತಿತ್ತು. ಮಗು ಜನಿಸುವಾಗಲೇ ಒಂದು ಮಾಂಸದ ಮುದ್ದೆಯಂತಿತ್ತು. ಮಗುವಿನ ಮೈಯಲ್ಲಿ ಚರ್ಮಗಳು ಎದ್ದು ಬರುತ್ತಿತ್ತು ! ಮಗುವನ್ನು ಎತ್ತಿ ಮುದ್ದಾಡಿದರೆ ಚರ್ಮ ಸುಳಿದು ರಕ್ತ ಬರುತ್ತದೋ ಎಂಬ ಭಯದಿಂದ ಆ ಆಸೆಯನ್ನೂ ಹತ್ತಿಕ್ಕಿದ್ದರು ಈ ದಂಪತಿ.
ನಂತರ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಲವಲವಿಕೆಯಿಂದ ಕುಣಿದಾಡಿ ಮನೆ ಬೆಳಕಾಗಬೇಕಿದ್ದ ಮಗು ಕಂಜೆನೆಂಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಯಿತು.
ಈ ರೋಗದ ಮುಖ್ಯ ಲಕ್ಷಣವೇನೆಂದರೆ ದೇಹದಲ್ಲಿ ಚರ್ಮ ಎದ್ದು ಅಲ್ಲಿಂದ ರಕ್ತ ಒಸರುವುದು. ಹಾಗಾಗಿ ತುಂಬ ಜಾಗರೂಕತೆಯಿಂದ ಮಗುವನ್ನು ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯವಾಗಿ ದೇಹದಲ್ಲಿ 28 ದಿನಕ್ಕೊಮ್ಮೆ ದೇಹದ ಚರ್ಮ ಬದಲಾವಣೆಯಾಗುತ್ತಿದ್ದರೆ ಈ ಕಾಯಿಲೆ ಇದ್ದವರಿಗೆ ಚರ್ಮದ ಬೆಳವಣಿಗೆ ಪ್ರತಿ ನಾಲ್ಕು ದಿನಕೊಮ್ಮೆಯಿರುತ್ತದೆ.
ಹೀಗಾಗಿ ಚರ್ಮ ತಟಸ್ಥವಾಗಿ ನಿಲ್ಲದಿರುವುದರಿಂದ ರಕ್ತ ಹೊರಚಿಮ್ಮುತ್ತ ಇರುತ್ತದೆ. ಇದು ಮಗುವಿಗೂ ಹಿಂಸೆ. ಇದರ ಬಗ್ಗೆ ಚಿಂತಾಕ್ರಾಂತರಾದ ಹೆತ್ತವರು ಹಲವು ತಜ್ಞ ವೈದ್ಯರನ್ನು ಸಂಪರ್ಕಿಸಿದರೂ ಮಗುವಿನ ಕಾಯಿಲೆಯಲ್ಲಿ ಒಂದಿಷ್ಟು ಬದಲಾವಣೆಯಾಗಲಿಲ್ಲ.
ಕೈಯಲ್ಲಿದ್ದ ಹಣವೆಲ್ಲ ಮಗುವಿನ ಚಿಕಿತ್ಸೆಗೆಂದು ಖರ್ಚಾಗಿ ಮಗುವಿನ ಚಿಕಿತ್ಸೆ ಮುಂದುವರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸುಪ್ರಿತ್ನ ಹೆತ್ತವರು ಇದ್ದಾರೆ. ಮಕ್ಕಳಲ್ಲಿ ದೇವರನ್ನು ಕಾಣಿರಿ ಎನ್ನುತ್ತಾರೆ. ಈ ಮಗುವಿನ ಮುಖದಲ್ಲಿ ದೇವರನ್ನು ಕಂಡರೆ ನಮ್ಮಿಂದ ಏನಾದರೂ ಸಹಾಯ ಮಾಡುವುದು ಸಾಧ್ಯವಾಗುತ್ತದೆ.
ಆ ಮಗು ಬೇಗ ಗುಣವಾಗಲಿ ಎಂದು ಹಾರೈಸುತ್ತಾ ಸಹಾಯದ ಹಸ್ತ ಚಾಚೋಣವೇ?
ರಾಜೇಶ್ ಅವರ ಸಂಪರ್ಕ: 9591238761
NAME : Rajesh
Bank: Corporation bank
Branch: Shirthady
ACCOUNT NO: 023100101017346
IFSC CODE: 0000231