ಕೆಸಿಎಫ್ ಜಿದ್ದಾ ಝೋನಲ್ ಪದಾಧಿಕಾರಿಗಳ ಆಯ್ಕೆ
ಜಿದ್ದಾ,ಎ.15: ಕೆಸಿಎಫ್ ಜಿದ್ದಾ ಝೋನಲ್ ಮಹಾಸಭೆಯು ಶುಕ್ರವಾರ ಜಿದ್ದಾ ಕೆಸಿಎಫ್ ಸೆಂಟರ್ ನಲ್ಲಿ ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆಸಿಎಫ್ ಶರಫಿಯ್ಯ ಸೆಕ್ಟರ್ ಅಧ್ಯಕ್ಷ ಉಮರ್ ಫಾರೂಕ್ ಸಅದಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಈಶ್ವರಮಂಗಳ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಸಯ್ಯದ್ ಖಾಲೀದ್ ತಂಙಳ್ ಅವರು ಲೆಕ್ಕ ಪತ್ರ ಮಂಡಿಸಿದರು.
ಈ ವೇಳೆ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗ ಚೆಯರ್ ಮ್ಯಾನ್ ಸಲೀಂ ಕನ್ಯಾಡಿ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಿದರು.
ಅಧ್ಯಕ್ಷರಾಗಿ ಸೈಯದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಕೋಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಈಶ್ವರಮಂಗಳ, ಕೋಶಾಧಿಕಾರಿಯಾಗಿ ಸೈಯದ್ ಖಾಲಿದ್ ತಂಙಳ್, ಆರ್ಗನೈಝಿಂಗ್ ಅಧ್ಯಕ್ಷ ರಾಗಿ ಮುಹಮ್ಮದ್ ಹನೀಫ್ ಸಖಾಫಿ ಸಾಲೆತ್ತೂರು, ಆರ್ಗನೈಝಿಂಗ್ ಕಾರ್ಯದರ್ಶಿಯಾಗಿ ಇಕ್ಬಾಲ್ ಕಕ್ಕಿಂಜೆ,ಎಜುಕೇಶನಲ್ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಮುಸ್ಲಿಯಾರ್ ಸಂಪ್ಯ, ಎಜುಕೇಶನಲ್ ಕಾರ್ಯದರ್ಶಿಯಾಗಿ ಯಹ್ಯಾ ಬಿಳಿಯೂರು, ರಿಲೀಫ್ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಬಾಳೆಹೊನ್ನೂರು, ರಿಲೀಫ್ ಕಾರ್ಯದರ್ಶಿಯಾಗಿ ಮುಹಮ್ಮದ್ ಕಲ್ಲರ್ಬೆ, ಪಬ್ಲಿಕೇಶನ್ ಅಧ್ಯಕ್ಷರಾಗಿ ಇಬ್ರಾಹೀಂ ಕಿನ್ಯಾ ,ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಇಕ್ಬಾಲ್ ಮದನಿ ತ್ವಾಯಿಫ್ ಅವರು ಆಯ್ಕೆಗೊಂಡರು.