ಲ್ಯಾಪ್ಟಾಪ್ ಎಲ್ಲಿ?
ಮಾನ್ಯರೆ,
ಈ ಮೊದಲು ಪ. ಜಾ., ಪ. ಪಂ. ವಿದ್ಯಾರ್ಥಿಗಳಿಗೆ ಘೋಷಣೆ ಮಾಡಿದ ಉಚಿತ ಲ್ಯಾಪ್ಟಾಪ್ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈಗ ಮತ್ತೆ ಸದನದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವ ಘೋಷಣೆ ಕೇಳಿಬರುತ್ತಿದೆ.
ಸರಕಾರದ ಯೋಜನೆಗಳು ಘೋಷಣೆ ಮಾಡುವ ವೇಗದಲ್ಲಿ ಅನುಷ್ಠಾನಕ್ಕೆ ಬರುವುದಿಲ್ಲ. ಯೋಜನೆಗಳ ಉಪಯೋಗ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ.
ಆದ್ದರಿಂದ ಸಂಬಂಧಿತರು ಕೇವಲ ಆಸೆ ತೋರಿಸದೆ, ಹಿಂದೆ ಘೋಷಿಸಿದ ಯೋಜನೆಯನ್ನು ಅರ್ಹ ವಿದ್ಯಾರ್ಥಿಗಳಿಗೆ ಅದಷ್ಟು ಬೇಗನೆ ತಲುಪಿಸುವ ಕಾರ್ಯಕ್ಕೆ ಮುಂದಾಗಬೇಕು. ಹಾಗೆಯೇ ಈಗ ಘೋಷಿಸಿದ ಯೋಜನೆಗಳು ಮುಂಬರುವ ದಿನಗಳಲ್ಲಿ ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸರಕಾರ ಮುಂದಾಗಬೇಕು.
Next Story