ಅನಾಗರಿಕ ಹೇಳಿಕೆ
ಮಾನ್ಯರೆ,
ವಿವಾದಿತ ‘ಪದ್ಮಾವತಿ’ ಚಲನಚಿತ್ರದ ನಾಯಜಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಹತ್ಯೆಗೈದವರಿಗೆ ರೂ. 10 ಕೋಟಿ ನೀಡುವುದಾಗಿ ಬಿಜೆಪಿ ನಾಯಕ ಸೂರಜ್ ಪಾಲ್ ಅವರ ಹೇಳಿಕೆ ಖಂಡನೀಯವಾದದ್ದು. ಸಿನೆಮಾದ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ದೇಶದಲ್ಲಿ ಕಾನೂನು ವ್ಯವಸ್ಥೆಯಿದೆ. ಇದನ್ನು ಗಾಳಿಗೆ ತೂರಿ ನೇರವಾಗಿ ಕೊಲ್ಲುವ ಬೆದರಿಕೆ ನೀಡುವುದು ಅನಾಗರಿಕ ಲಕ್ಷಣ. ಭಾರತದಲ್ಲಿ ಮಹಿಳೆಯನ್ನು ತಾಯಿಯ ಸ್ಥಾನದಲ್ಲಿ ನೋಡಲಾಗುತ್ತದೆ. ಸ್ತ್ರೀಯನ್ನು ಆದರಿಸುವುದು ಈ ದೇಶದ ಸಂಸ್ಕೃತಿಯಾಗಿದೆ. ಆದರೆ ಇಂತಹ ರಾಜಕೀಯ ನಾಯಕರು ತಮ್ಮ ಹೊಲಸು ಬಾಯಿಯಿಂದ ದೇಶದ ಸಂಸ್ಕೃತಿಗೆ ಕಳಂಕ ತರುತ್ತಿದ್ದು, ಇಂತಹವರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು. ಅಲ್ಲದೆ ಪ್ರಸಕ್ತ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕುವಂತಹ ಹೇಳಿಕೆ ನೀಡುವ ದುಷ್ಟಶಕ್ತಿಗಳ ವಿರುದ್ಧ ಜನತೆ ಸದಾ ಜಾಗೃತರಾಗಬೇಕಾಗಿದೆ.
Next Story