ಸಂವಿಧಾನದ ರಕ್ಷ ಣೆಯಾಗಲಿ
ಮಾನ್ಯರೇ,
ಅವರು ಧಾರ್ಮಿಕ ಮೀಸಲಾತಿ ಪಡೆದಿದ್ದಾರೆ ಹಾಗಾಗಿ ಅವರು ಧರ್ಮ ರಕ್ಷಣೆಯಲ್ಲಿ ತೊಡಗಿದ್ದಾರೆ. ಧರ್ಮವನ್ನು ರಕ್ಷಿಸಿದರೆ ಧರ್ಮ ಶೇ.3ರಷ್ಟು ಪುರೋಹಿತರನ್ನು ರಕ್ಷಿಸುತ್ತದೆ, ಎಸ್ಸಿ, ಎಸ್ಟಿ, ಒಬಿಸಿಗಳನ್ನಲ್ಲ.
ಧಾರ್ಮಿಕ ವಲಯದಲ್ಲಿ ನಿನ್ನ ಸ್ಥಾನಮಾನ ಏನು, ಧಾರ್ಮಿಕ ವಲಯದ ಸಂಪೂರ್ಣ ಸವಲತ್ತು ಪಡೆಯುತ್ತಿರುವವನಾರು? ಎಂದು ಶಾಂತ ಚಿತ್ತದಿಂದ ಚಿಂತಿಸಿದರೆ ಅರಿವಾಗುತ್ತದೆ. ಹಾಗಾಗಿ ಅವರು ಧರ್ಮ ರಕ್ಷಣೆಯಲ್ಲಿ ತೊಡಗಿದ್ದಾರೆ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ಶೇ 100ರಷ್ಟು ಭಾರತೀಯರನ್ನು ರಕ್ಷಿಸುತ್ತದೆ. ನಾವು ಸಾಂವಿಧಾನಿಕವಾಗಿ ಮೀಸಲಾತಿ ಪಡೆದಿದ್ದೇವೆ ಸಂವಿಧಾನದ ರಕ್ಷಣೆ ಹೇಗೆ ಮಾಡುತ್ತಿದ್ದೇವೆ ? ಶಾಂತ ಚಿತ್ತದಿಂದ ಯೋಚಿಸಿದರೆ ವಾಸ್ತವದ ಅರಿವಾಗುತ್ತದೆ.
Next Story