ಅಪರಾಧಗಳಿಗೆ ಕಡಿವಾಣವಿಲ್ಲವೇ?
ಮಾನ್ಯರೇ,
ಒಂದೆಡೆ ಗೋ ಸಾಗಣೆ ನೆಪವನ್ನಿಟ್ಟುಕೊಂಡು ಕ್ರಿಮಿನಲ್ಗಳು ಅಮಾಯಕರ ಮೇಲೆ ಹಲ್ಲೆ ನಡೆಸಿ ಕೊಲ್ಲುತ್ತಿರುವುದಾದರೆ, ಮಗದೊಂದೆಡೆ ಮಕ್ಕಳ ಅಪಹರಣಕಾರರು ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು ಅಸಹಾಯಕ ಮುಗ್ಧರನ್ನು ಗುಂಪು ಹಲ್ಲೆ ನಡೆಸಿ ಅಮಾನುಷವಾಗಿ ಕೊಲ್ಲುವುದು, ಮಾತ್ರವಲ್ಲ ಅದನ್ನು ವಿಜೃಂಭಿಸಿ ವೀಡಿಯೊ ತುಣುಕುಗಳನ್ನು ವಾಟ್ಸ್ಆ್ಯಪ್, ಫೇಸ್ಬುಕ್ ಮೂಲಕ ಹಂಚಿಕೊಳ್ಳುತ್ತಿರುವ ರಾಕ್ಷಸರು ಈ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಇವರನ್ನು ನಿಯಂತ್ರಿಸಲು ಯಾರು ಇಲ್ಲದ ಸ್ಥಿತಿ ದೇಶದಲ್ಲಿ ನಿರ್ಮಾಣಗೊಂಡಿದೆ. ಅಪರಾಧಿಗಳನ್ನು ಬಂಧಿಸಿದರೂ ಪ್ರಭಾವಿ ರಾಜಕಾರಣಿಗಳನ್ನು ಬಳಸಿಕೊಂಡು ಇಂತಹವರು ತಪ್ಪಿಸಿಕೊಳ್ಳುತ್ತಾರೆ. ಇನ್ನಾದರೂ ಸಂಬಂಧಿತ ವ್ಯವಸ್ಥೆ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಈ ದೇಶವು ಗೂಂಡಾರಾಜ್ ಆಗಿ ಮಾರ್ಪಡುವುದರಲ್ಲಿ ಸಂದೇಹವೇ ಇಲ್ಲ. ಮಾನ್ಯ ಪ್ರಧಾನಿಯವರು ಇನ್ನಾದರೂ ವಿದೇಶ ಸುತ್ತುವುದನ್ನು ನಿಲ್ಲಿಸಿ ದೇಶದ ಕಾನೂನು ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಿಯಾರೇ?.