ಡಾಮರೀಕರಣ ಮಾಡಿ
ಮಾನ್ಯರೇ,
ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಿಂದ ನಂತೂರುವರೆಗಿನ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಸಂಸದರು ಈ ತಿಂಗಳ ಅಂತ್ಯದೊಳಗೆ ಹೆದ್ದಾರಿಯನ್ನು ಸರಿಪಡಿಸಲಾಗುತ್ತದೆ ಎಂದಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆದ್ದಾರಿಯ ಈ ಪ್ರದೇಶದಲ್ಲಿ ಹೆಚ್ಚಾಗಿ ಘನವಾಹನಗಳೇ ಸಂಚರಿಸುತ್ತಿರುತ್ತವೆ. ಆದ್ದರಿಂದ ಹೆದ್ದಾರಿಗೆ ತೇಪೆ ಹಾಕದೆ ಸಂಪೂರ್ಣ ಡಾಮರೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಹಾಳಾಗುವುದು ತಪ್ಪೀತು.
-ಆನಂದ ಕಾಂಚನ್, ಮಂಗಳೂರು
Next Story