ಢಾಕಾ ಕೆಫೆ ದಾಳಿ ನಡೆಸಿದ ಸಂಘಟನೆಯ ಮುಖ್ಯಸ್ಥನ ಹತ್ಯೆ
ಢಾಕಾ, ಅ. 21: ಢಾಕಾದ ಕೆಫೆಯೊಂದರ ಮೇಲೆ ಎರಡು ತಿಂಗಳ ಹಿಂದೆ ಭಯೋತ್ಪಾದಕ ದಾಳಿ ನಡೆಸಿದೆ ಎಂಬ ಆರೋಪ ಹೊತ್ತಿರುವ ಉಗ್ರ ಸಂಘಟನೆಯೊಂದರ ಮುಖ್ಯಸ್ಥ ಪೊಲೀಸರು ನಡೆಸಿದ ದಾಳಿಯ ವೇಲೆ ಮೃತಪಟ್ಟಿದ್ದಾನೆ ಎಂದು ದೇಶದ ಉನ್ನತ ಪೊಲೀಸ್ ತಂಡ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್ಎಬಿ) ಶುಕ್ರವಾರ ತಿಳಿಸಿದೆ.
ಮೃತ ಭಯೋತ್ಪಾದಕ ಅಬ್ದುರ್ರಹಮಾನ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ನ ನೂತನ ಬಣ ನಿಯೊ-ಜೆಎಂಬಿಯ ಮುಖ್ಯಸ್ಥ ಎಂಬುದಾಗಿ ಆರ್ಎಬಿ ಖಚಿತಪಡಿಸಿದೆ.
Next Story