ಭಾರತದ ಸೇನೆಯ ಗುಂಡಿನ ದಾಳಿಗೆ ನಾಲ್ವರು ಪಾಕ್ ಸೈನಿಕರ ಸಾವು
ಶ್ರೀನಗರ, ಎ.17: ಜಮ್ಮು ಮತ್ತು ಕಾಶ್ಮೀರದ ನೌಶೇರ್ ಸೆಕ್ಟರ್ ನಲ್ಲಿ ಇಂದು ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ಸೇನೆಯ ಮೇಲೆ ಭಾರತದ ಸೇನೆ ನಡೆಸಿದ ಪ್ರತಿ ದಾಳಿಗೆ ನಾಲ್ವರು ಪಾಕ್ ಸೈನಿಕರು ಮೃತಪಟ್ಟು 8 ಮಂದಿ ಗಾಯಗೊಂಡಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತದ ಸೇನೆಯತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು. ಭಾರತದ ಸೇನೆ ಇದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಪಾಕಿಸ್ತಾನ ನಾಲ್ವರು ಸೈನಿಕರನ್ನು ಕಳೆದುಕೊಂಡಿದೆ. ಗಡಿಯಲ್ಲಿ ಪಾಕ್ ಮತ್ತು ಭಾರತದ ಸೈನಿಕರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Next Story