ಕೆನಡಾದ ರಕ್ಷಣಾ ಸಚಿವರನ್ನೇ ಅಂಗಡಿ ಮಾಲಕ ತರಾಟೆಗೆ ತೆಗೆದುಕೊಂಡಿದ್ದು ಏಕೆ ?
ವೈರಲ್ ವೀಡಿಯೊ
ಕೆನಡಾ, ಜು.12: ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ರನ್ನು ಅಂಗಡಿ ಮಾಲಕನೋರ್ವ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾರಿನಲ್ಲಿ ಕುಳಿತು ಚೆರ್ರಿ ಹಣ್ಣುಗಳನ್ನು ತಿಂದ ಹರ್ಜಿತ್ ಸಿಂಗ್ ಅದರ ಬೀಜಗಳನ್ನು ಪಂಜಾಬಿ ಮೂಲದ ವ್ಯಕ್ತಿಯೋರ್ವನ ಅಂಗಡಿಯ ಮುಂದೆ ಎಸೆದಿದ್ದಾರೆ. ಇದರಿಂದ ಕೆರಳಿದ ಆತ ರಕ್ಷಣಾ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ಸಂದರ್ಭ ಹರ್ಜಿತ್ ಸಿಂಗ್ ತಾವು ಯಾರು ಎಂಬುದನ್ನು ಮರೆಮಾಚಲು ಯತ್ನಿಸಿದ್ದರು. ಆದರೆ ಈ ಬಗ್ಗೆ ಅಂಗಡಿ ಮಾಲಕನಿಗೆ ಅರಿವಿದ್ದು, ಸಚಿವರ ನಡವಳಿಕೆ ಸರಿಯಲ್ಲ ಎಂದು ತೀವ್ರ ತರಾಟೆಗೈದಿದ್ದಾನೆ. ಇದರಿಂದ ತೀವ್ರ ಮುಜುಗರಕ್ಕೊಳಗಾದ ಹರ್ಜಿತ್ ಸಿಂಗ್ ಈ ಬಗ್ಗೆ ತಪ್ಪಾಯಿತು ಎಂದು ಕ್ಷಮೆಯಾಚಿಸಿದ್ದಾರೆ.
Next Story