ಗೋಡೆಗೆ ಕಾರು ಢಿಕ್ಕಿ: ಅಧಿಕಾರಿ ಮೃತ್ಯು
ಬೆಂಗಳೂರು, ನ.23: ವೇಗವಾಗಿ ಹೋಗುತ್ತಿದ್ದ ಕಾರು ಮನೆ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಕೇಂದ್ರೀಯ ಉಗ್ರಾಣ ನಿಗಮ ಸಂಸ್ಥೆಯ ಅಧಿಕಾರಿ ಕೃಷ್ಣಪ್ರಸಾದ್ ಅವರು ಮೃತಪಟ್ಟಿರುವ ಘಟನೆ ಇಲ್ಲಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ 9.10 ರಲ್ಲಿ ವೇಗವಾಗಿ ವಾಹನ ಚಲಾವಣೆ ನಡೆಸುತ್ತಿದ್ದ ವೇಳೆ ರಾಜಾಜಿನಗರದ 5ನೆ ಪಿ ಬ್ಲಾಕ್ನ ವೆಂಕಟ್ ಸ್ಕೂಲ್ ಬಳಿಯಿರುವ ಮನೆ ಗೋಡೆಗೆ ಡಿಕ್ಕಿ ಹೊಡೆದಿದ್ದು, ಕೃಷ್ಣಪ್ರಸಾದ್ಗೆ ತೀವ್ರಗಾಯವಾಗಿತ್ತು. ಕೂಡಲೇ ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗ ಮಧ್ಯೆದಲ್ಲಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ರಾಜಾಜಿನಗರದಲ್ಲಿ ವಾಸಿಸುತ್ತಿರುವ ಇವರು ಕೇಂದ್ರೀಯ ಉಗ್ರಾಣ ಸಂಸ್ಥೆಯಲ್ಲಿ ಅಕೌಂಟೆಂಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story