ಬೆಂಗಳೂರು: ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಬೆಂಗಳೂರು, ಫೆ.9: ಕಳೆದ 15ದಿನಗಳ ಹಿಂದೆ ಕೊಲೆಯಾಗಿದ್ದ ಆರೆಕ್ಸ್ಸ್ ಮಂಜನ ದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬೆಲೆ ಮೋರಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ನೆಲಮಂಗಲದ ರಾಯನ್ ನಗರ ನಿವಾಸಿಯಾಗಿದ್ದ ಆರೆಕ್ಸ್ ಮಂಜನನ್ನು ಹಣಕಾಸಿನ ವಿಚಾರಕ್ಕಾಗಿ ಹತ್ಯೆ ಮಾಡಲಾಗಿತ್ತು. ಹೀಗಾಗಿ, ಮಂಜನ ಗೋಡನ್ ಬಾಡಿಗೆಗೆ ಪಡೆದಿದ್ದ ಶಂಶುದ್ದೀನ್, ಸೈಯದ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ 20 ದಿನಗಳ ಹಿಂದೆ ಮಂಜ ನಾಪತ್ತೆಯಾಗಿದ್ದಾನೆಂದು ಆತನ ಸಂಬಂಧಿಕರು ನೆಲಮಂಗಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಮೃತದೇಹಕ್ಕಾಗಿ ಪೋಲಿಸರು ಶೋಧ ನಡೆಸುತ್ತಿದ್ದರು..
Next Story