ನಲಪಾಡ್ ಹಲ್ಲೆ ಪ್ರಕರಣ: ಡಾ.ರಾಜ್ ಮೊಮ್ಮಗನ ವಿಚಾರಣೆ
ಬೆಂಗಳೂರು, ಎ.13: ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಡಾ.ರಾಜ್ಕುಮಾರ್ ಅವರ ಮೊಮ್ಮಗ ಗುರು ರಾಜ್ಕುಮಾರ್ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ ಗುರು ರಾಜ್ಕುಮಾರ್ ಹೇಳಿಕೆಯನ್ನು ಸಿಸಿಬಿ ತನಿಖಾಧಿಕಾರಿ ಅಶ್ವತ್ಥ್ ಗೌಡ ಅವರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಫರ್ಜಿಕಫೆಗೆ ನಾನು ಹೋಗಿರಲಿಲ್ಲ. ಘಟನೆ ಬಗ್ಗೆ ಸ್ನೇಹಿತರು ಕರೆ ಮಾಡಿ ತಿಳಿಸಿದಾಗ, ನಾನು ಮಲ್ಯ ಆಸ್ಪತ್ರೆಗೆ ಹೋದೆ. ಮಲ್ಯ ಆಸ್ಪತ್ರೆಯ ಐಸಿಯೂನಲ್ಲಿಯೂ ನಲಪಾಡ್ ಗಲಾಟೆ ಮಾಡಿದ್ದರು ಎಂದು ಸಿಸಿಬಿಗೆ ಗುರು ರಾಜ್ಕುಮಾರ್ ಹೇಳಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ನಂತರ ರಾಘವೇಂದ್ರ ರಾಜ್ಕುಮಾರ್ ಪುತ್ರ ಗುರು ರಾಜ್ಕುಮಾರ್ ಆಸ್ಪತ್ರೆಯಲ್ಲಿ ನಡೆದ ಗಲಾಟೆ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೆ, ಫೆ. 17ರ ರಾತ್ರಿ ಘಟನೆ ನಡೆದ ನಂತರ ಗುರು ರಾಜ್ಕುಮಾರ್ ಮಲ್ಯ ಆಸ್ಪತ್ರೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.