ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳ ಸ್ಥಾಪನೆ: ಸಂಜೀವ್ ಕುಮಾರ್
ಬೆಂಗಳೂರು, ಮೇ 13: ರಾಜ್ಯ ವಿಧಾನಸಭಾ ಚುನಾವಣೆಯ 222 ಕ್ಷೇತ್ರಗಳ ಮತಗಳ ಎಣಿಕೆಗೆ ರಾಜ್ಯಾದ್ಯಂತ ಒಟ್ಟು 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ತಿಳಿಸಿದ್ದಾರೆ.
ರವಿವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ 2, ದಕ್ಷಿಣ ಕನ್ನಡ-2, ಮೈಸೂರು 2, ಮೈಸೂರು-3, ತುಮಕೂರು-3 ಮತ ಎಣಿಕೆ ಕೇಂದ್ರಗಳನ್ನು ಹೊರತು ಪಡಿಸಿದಂತೆ ಉಳಿದ ಜಿಲ್ಲೆಗಳಲ್ಲಿ ಒಂದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
11,160 ಸಿಬ್ಬಂದಿ: ಮತ ಎಣಿಕೆ ಕೇಂದ್ರಗಳಲ್ಲಿ ಒಟ್ಟು 11,160 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಲ್ಲರಿಗೂ ಸೂಕ್ತವಾದ ತರಬೇತಿಯನ್ನು ನೀಡಲಾಗಿದೆ. ಹಾಗೂ ಕಾನೂನು ಸುವ್ಯವಸ್ಥೆಗಾಗಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಒಟ್ಟು 3,100 ಟೇಬಲ್ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ವಿವರಿಸಿದರು.
ಮತ ಎಣಿಕೆ ನಡೆಯುವ ಸ್ಥಳಗಳು
-ಬಿಬಿಎಂಪಿ ಕೇಂದ್ರ: ಬಿಎಂಎಸ್ ಕಾಲೇಜು, ಬಸವನಗುಡಿ
-ಬಿಬಿಎಂಪಿ ಉತ್ತರ: ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ
-ಬಿಬಿಎಂಪಿ ದಕ್ಷಿಣ: ಎಸ್ಎಸ್ಎಂಆರ್ವಿ ಕಾಲೇಜು, ಜಯನಗರ
-ಬೆಂಗಳೂರು ಗ್ರಾಮೀಣ: ಆರ್.ಸಿ.ಕಾಲೇಜು, ಬಸವೇಶ್ವರ ವೃತ್ತ
-ಬೆಂಗಳೂರು ನಗರ-ಮಹಾರಾಣಿ ಕಾಲೇಜು, ಶೇಷಾದ್ರಿ ರಸ್ತೆ
-ದಕ್ಷಿಣ ಕನ್ನಡ-ಮಹಾತ್ಮ ಗಾಂಧಿ ಸೆಂಟನರಿ ಪಿಯು ಕಾಲೇಜು
-ಉಡುಪಿ-ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು