ಬೆಂಗಳೂರು: ಜೂ.24ರಂದು ಈದ್ ಮಿಲನ್
ಬೆಂಗಳೂರು, ಜೂ.22: ವಿಷನ್ ಕರ್ನಾಟಕ ಸಂಘಟನೆಯು ಜೂ.24ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಬೆನ್ಸನ್ಟೌನ್ನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್(ಐಎಸ್ಐ) ಸಭಾಂಗಣದಲ್ಲಿ ‘ಈದ್ ಮಿಲನ್’ ಸೌಹಾರ್ದ ಕೂಟವನ್ನು ಆಯೋಜಿಸಿದೆ ಎಂದು ಕಾರ್ಯಕ್ರಮದ ಆಯೋಜಕ ಗುಲಾಮೆ ಗೌಸ್, ಸಂಚಾಲಕ ವಕೀಲ ಅಯ್ಯೂಬ್ಖಾನ್, ಜಂಟಿ ಸಂಚಾಲಕ ಮುಖ್ತಾರ್ ಅಹ್ಮದ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಸ್ಐಓ ‘ಈದ್ ಮಿಲನ್’: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಷನ್ (ಎಸ್ಐಓ) ವತಿಯಿಂದ ಜೂ.24ರಂದು ಸಂಜೆ 6.30ಕ್ಕೆ ನಗರದ ಕ್ವೀನ್ಸ್ರಸ್ತೆ ಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಈದ್ ಮಿಲನ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿದೆ.
ಮುಖ್ಯ ಭಾಷಣಕಾರರಾಗಿ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ಹೆಗ್ಡೆ, ಮಂಗಳೂರಿನ ಯೆನಪೋಯ ವಿಶ್ವವಿದ್ಯಾಲಯದ ಇಸ್ಲಾಮಿಕ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡಾ.ಜಾವೆದ್ ಜಮೀಲ್, ಜಮಾತೆ ಇಸ್ಲಾಮಿ ಹಿಂದ್ ಮುಖಂಡ ಅಕ್ಬರ್ ಅಲಿ ಹಾಗೂ ಎಸ್ಐಓ ರಾಜ್ಯಾಧ್ಯಕ್ಷ ಮುಹಮ್ಮದ್ ರಫಿಕ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.