ಡಿಸಿಪಿ ಮುಂದೆ ನಟ ದುನಿಯಾ ವಿಜಯ್ ಹಾಜರು
ಬೆಂಗಳೂರು, ನ.7: ಗಿರಿನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ಮುಂದೆ ಹಾಜರಾದರು.
ಯಾವುದೇ ಗಲಾಟೆ ಮಾಡಬಾರದು. ಕಾನೂನಿಗಾಗಲಿ ಹಾಗೂ ಸಾರ್ವಜನಿಕರಿಗಾಗಲಿ ಧಕ್ಕೆ ತರುವಂತಹ ಕೆಲಸ ಮಾಡಬಾರದೆಂದು ದುನಿಯಾ ವಿಜಯ್ ಗೆ ಡಿಸಿಪಿ ತಿಳುವಳಿಕೆ ಹೇಳಿದರು.
ದುನಿಯಾ ವಿಜಯ್ ಕುಟುಂಬದವರು ಪದೇಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದಲ್ಲದೇ ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ವಿಜಯ್ ಹಾಗೂ ಪತ್ನಿ ನಾಗರತ್ನಾ, ಕೀರ್ತಿಗೌಡ ಸೇರಿದಂತೆ 7 ಮಂದಿಗೆ 107 ಸೆಕ್ಷನ್ ಅಡಿ ದೂರು ದಾಖಲಾಗಿತ್ತು. ಈ ಕುರಿತು ಡಿಸಿಪಿ ಅಣ್ಣಾಮಲೈ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
Next Story