ನ.9: ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಸಮಾವೇಶದ ಸ್ವಾಗತ ಸಮಿತಿ ರಚನೆ
ಬೆಂಗಳೂರು,ನ.8: 2019ರ ಜ.26,27 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರತಿನಿಧಿ ಸಮಾವೇಶ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಸ್ವಾಗತ ಸಮಿತಿ ರಚನೆಯು ನ.9 ರಂದು ಸಂಜೆ 8 ಗಂಟೆಗೆ ಐಇಬಿಐ ಕಚೇರಿ, ರಿಚ್ಮಂಡ್ ಟೌನ್ ನಲ್ಲಿ ನಡೆಯಲಿದೆ.
ಸಭೆಯಲ್ಲಿ ಕೆ.ಎಸ್ ಆಟಕೋಯ ತಂಙಳ್, ಎನ್.ಕೆ.ಎಂ ಶಾಫಿ ಸಅದಿ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಉಪಾಧ್ಯಕ್ಷ ಸಿಟಿಎಂ ತಂಙಲ್ ಮನ್ಶರ್, ಶರೀಫ್ ಮಾಸ್ಟರ್ ಹಾಗೂ ಬೆಂಗಳೂರು ಜಿಲ್ಲಾ ಎಸ್.ವೈ.ಎಸ್, ಎಸ್ಸೆಸ್ಸೆಫ್, ಎಸ್.ಎಮ್.ಎ, ಎಸ್.ಜೆ.ಎಂ, ಎಸ್.ಜೆ.ಯು ಹಾಗೂ ಡಿವಿಶನ್, ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story