ಅರ್ಜುನ್ ಸರ್ಜಾ ವಿರುದ್ಧ ಆರೋಪ: ನ.19ಕ್ಕೆ ನಿರ್ಬಂಧಕಾಜ್ಞೆ ಅರ್ಜಿ ವಿಚಾರಣೆ
ಬೆಂಗಳೂರು, ನ.9: ನಟಿ ಶ್ರುತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಸಲ್ಲಿಸಿರುವ ನಿರ್ಬಂಧಕಾಜ್ಞೆ ಅರ್ಜಿ ವಿಚಾರಣೆ ನ.19ಕ್ಕೆ ಮುಂದೂಡಿಕೆಯಾಗಿದೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಶ್ರುತಿ ವಿರುದ್ಧ ಸಲ್ಲಿಸಿದ್ದ ನಿರ್ಬಂಧಕಾಜ್ಞೆ ಅರ್ಜಿ ವಿಚಾರಣೆಯು ಶುಕ್ರವಾರ ನಗರದ ಮೆಯೋಹಾಲ್ನ 22ನೆ ಸಿಸಿಎಚ್ ಹಾಲ್ ನಲ್ಲಿ ನಡೆಯಿತು. ಶುಕ್ರವಾರ ನಗರದ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್, ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ನ.19ಕ್ಕೆ ಮುಂದೂಡಿ ಆದೇಶ ನೀಡಿದೆ.
ಮತ್ತೊಂದೆಡೆ ಕಬ್ಬನ್ಪಾರ್ಕ್ ಠಾಣಾ ಪೊಲೀಸರು ಶ್ರುತಿ ಹರಿಹರನ್ ಸಲ್ಲಿಸಿದ ದೂರಿನ ವಿಚಾರಣೆಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
Next Story