ಬಿಬಿಎಂಪಿ ವ್ಯಾಪ್ತಿಯ ಪಾದಚಾರಿ ರಸ್ತೆಯಲ್ಲಿ ಕಸ: 50 ಸಾವಿರ ದಂಡ
ಬೆಂಗಳೂರು, ನ.17: ಬಿಬಿಎಂಪಿ ವ್ಯಾಪ್ತಿಯ ಸಶ್ಮಾನ ಪ್ರದೇಶದ ಪಕ್ಕದಲ್ಲಿರುವ ಪಾದಚಾರಿ ರಸ್ತೆಯಲ್ಲಿ ಕಸದ ರಾಶಿಯನ್ನು ಕಂಡು, ಸಂಬಂಧಪಟ್ಟ ಗುತ್ತಿಗೆದಾರರಿಗೆ 50 ಸಾವಿರ ರೂ. ದಂಡ ವಿಧಿಸಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಆದೇಶಿಸಿದರು.
ಶನಿವಾರ ಶಾಂತಿನಗರದ ರುದ್ರಭೂಮಿ ಹಾಗೂ ಸುತ್ತ ಮುತ್ತ ಪ್ರದೇಶದಲ್ಲಿ ತಪಾಸಣೆ ನಡೆಸಿದ ಅವರು, ಸ್ಮಶಾನ ಪ್ರದೇಶದ ನೌಕರರಿಗೆ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಲು ಸೂಚಿಸಿದರು. ಬಳಿಕ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆಯುತ್ತಿರುವ ಸಿಗ್ನಲ್ ಫ್ರೀ ಕಾಮಗಾರಿ ಪರಿಶೀಲಿಸಿದರು. ಮಾಜಿ ಮೇಯರ್ ಜಿ.ಪದ್ಮಾವತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Next Story