ನ.19: ಟಿಪ್ಪು ಸುಲ್ತಾನ್ ಏಕತಾ ಪ್ರಶಸ್ತಿ ಪ್ರದಾನ
ಬೆಂಗಳೂರು, ನ. 17: ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ವತಿಯಿಂದ ಕನ್ನಡ ರಾಜ್ಯೋತ್ಸವ, ರಕ್ತದಾನ ಶಿಬಿರ ಹಾಗೂ ಟಿಪ್ಪು ಸುಲ್ತಾನ್ ಏಕತಾ ಪ್ರಶಸ್ತಿಯ ಪ್ರದಾನ ಸಮಾರಂಭವನ್ನು ನ.19ರಂದು ವಸಂತನಗರದ ದಾರುಲ್ ಸಲಾಂ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ರಂಗದ ಅಧ್ಯಕ್ಷ ಸರದಾರ್ ಅಹ್ಮದ್ ಖುರೇಸಿ, ಕಾರ್ಯಕ್ರಮವನ್ನು ಸೂಫಿ ವಲಿಬಾ ಖಾದ್ರಿ ಉದ್ಘಾಟಿಸಲಿದ್ದು, ಟಿಪ್ಪು ಸುಲ್ತಾನ್ ಏಕತಾ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷ ಮೌಲಾನ ಮುಹಮ್ಮದ್ ಝುಲ್ಫಿಕರ್ ನೂರಿ, ತಲಕಾಡು ಚಿಕ್ಕರಂಗೇಗೌಡ, ಕರ್ನಾಟಕ ರೈತರ ಸಂಘದ ವೀರಸಂಗಯ್ಯ, ದಿ.ಗೌರಿ ಲಂಕೇಶ್ ಪರವಾಗಿ ಕವಿತಾ ಲಂಕೇಶ್, ಚನ್ನ ಕೃಷ್ಣಪ್ಪ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
Next Story