ಬೆಂಗಳೂರು: ಇಬ್ಬರು ರೌಡಿಶೀಟರ್ಗಳ ಹತ್ಯೆ
ಬೆಂಗಳೂರು, ನ.22: ಕೋಣನಕುಂಟೆಯ ವೀವರ್ಸ್ ಕಾಲನಿಯಲ್ಲಿ ಬುಧವಾರ ರಾತ್ರಿ ಇಬ್ಬರು ರೌಡಿಶೀಟರ್ಗಳನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ಗಳಾದ ಮುರುಗನ್(34) ಹಾಗೂ ಪಳನಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಮಿಳುನಾಡು ಮೂಲದ ಮುರುಗನ್ ಹಾಗೂ ಬಿಟಿಎಸ್ ಮಂಜ ಎಂಬುವವನ ಗ್ಯಾಂಗ್ಗಳ ನಡುವೆ ಕಳೆದ 7 ವರ್ಷಗಳಿಂದ ವೈಷಮ್ಯ ಇತ್ತು ಎನ್ನಲಾಗಿದೆ.
ಮುರುಗನ್ ಹಾಗೂ ಪಳನಿ ಬುಧವಾರ ರಾತ್ರಿ ಬಾರ್ವೊಂದರಲ್ಲಿ ಮದ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದಾಗ, ನಡು ರಸ್ತೆಯಲ್ಲೆ ಬಿಟಿಎಸ್ ಮಂಜನ ಗ್ಯಾಂಗ್ನ 8 ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇವರಿಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Next Story