ಬೆಂಕಿ ಹಚ್ಚಿ ಪೇಂಟರ್ ಆತ್ಮಹತ್ಯೆ
ಬೆಂಗಳೂರು, ಫೆ.4: ಮದ್ಯದ ಅಮಲಿನಲ್ಲಿದ್ದ ಪೇಂಟರ್ ರಾಜು ಎಂಬಾತ ಥಿನ್ನರ್ನಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗಮ್ಮನ ಗುಡಿಯ ಕಲ್ಯಾಣನಗರದ ರಾಜು (35), ರವಿವಾರ ಸಂಜೆ 6ರ ವೇಳೆ ಪತ್ನಿಯನ್ನು ಮಾಂಸ ತರಲು ಅಂಗಡಿಗೆ ಕಳುಹಿಸಿದ್ದಾನೆ. ಕುಡಿದ ಅಮಲಿನಲ್ಲಿದ್ದ ಆತ, ಪೇಯಿಂಟ್ಗೆ ಬಳಸುವ ಥಿನ್ನರ್ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಬೆಂಕಿಯು ಇಡೀ ಮನೆ ಆವರಿಸಿ ರಾಜು ಸುಟ್ಟು ಹೋಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣ ದಾಖಲಿಸಿರುವ ಗಂಗಮ್ಮ ಗುಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story