ಎಸಿಬಿ ಬಲೆಗೆ ಬಿದ್ದ ಪಿಡಿಒ
ಬೆಂಗಳೂರು, ಎ.5: ಕಾಮಗಾರಿಯೊಂದರ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಓರ್ವನ ಮೇಲೆ ಎಸಿಬಿ ಮೊಕದ್ದಮೆ ದಾಖಲು ಮಾಡಿದೆ.
ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಕೃಷ್ಣಯ್ಯ ಎಂಬುವರ ವಿರುದ್ಧ ದೂರು ದಾಖಲಾಗಿದೆ ಎಂದು ಎಸಿಬಿ ತಿಳಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬೀಡಿಗೆರೆ ಗ್ರಾಮದ ಸಿವಿಲ್ ಕಂಟ್ರಾಕ್ಟರ್ ಒಬ್ಬರು, ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾದಗೊಂಡನಹಳ್ಳಿ ಗ್ರಾಮಕ್ಕೆ ನೀರುಗಾವಲು ಕಾಮಗಾರಿ ನಡೆಸಿ, ಕಾಮಗಾರಿಯ ನಾಮಿನಲ್ ಮಸ್ಟರ್ ರೋಲ್ನ (ಎನ್ಎಂಆರ್) ಮೊತ್ತ ಮಂಜೂರು ಮಾಡಲು ಪಿಡಿಒ ಕೃಷ್ಣಯ್ಯ, 48 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಶುಕ್ರವಾರ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ, ಕೃಷ್ಣಯ್ಯ ಲಂಚದ ಹಣವನ್ನು ಪಡೆಯುವಾಗ ಸೆರೆ ಹಿಡಿದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.
Next Story