ಚೌಕಿದಾರ್ ಗೆ ಭಯ ಇಲ್ಲದಿದ್ದರೆ ಮೊಹ್ಸಿನ್ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವೇನಿತ್ತು: ಸಿದ್ದರಾಮಯ್ಯ ಪ್ರಶ್ನೆ
ಐಎಎಸ್ ಅಧಿಕಾರಿ ಅಮಾನತಿಗೆ ಖಂಡನೆ
ಬೆಂಗಳೂರು, ಎ. 19: ‘ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಅವರನ್ನು ಅಮಾನತುಗೊಳಿಸಿದ್ದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಮುಹಮ್ಮದ್ ಮೊಹ್ಸಿನ್ ಅತ್ಯಂತ ಧೈರ್ಯವಂತ ಅಧಿಕಾರಿ. ಅದಕ್ಕಾಗಿ ಪ್ರಧಾನಿ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಆದರೆ, ಸ್ವಘೋಷಿತ ‘ಚುನಾವಣಾ ಚೌಕಿದಾರ್’ಗೆ ಯಾವುದೇ ಭಯ ಇಲ್ಲ ಎನ್ನುವುದಾದರೆ ಮೊಹ್ಸಿನ್ರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯ ಏನಿತ್ತು ಎಂದು ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮುಚ್ಚಿಡಲು ಏನೂ ಇಲ್ಲ ಎಂದ ಮೇಲೆ ಈ ರೀತಿಯ ಅಭದ್ರತೆಯಿಂದ ಪ್ರಧಾನಿ ಬಳಲುತ್ತಿರುವುದು ಏಕೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಕೇಳಿದ್ದಾರೆ.
ಎ.16ರಂದು ಮೊಹ್ಸಿನ್ ಛತ್ತಿಸ್ಗಡದ ಸಂಬ್ಲಾಪುರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು.